Advertisement

ಪ್ರಗತಿಪರರ ಹೆಸರಿನಲ್ಲಿ ದೊರೆಸ್ವಾಮಿ ರಾಜಕೀಯ: ರೇಣುಕಾಚಾರ್ಯ

09:01 AM Mar 01, 2020 | sudhir |

ಹೊನ್ನಾಳಿ: ದೊರೆಸ್ವಾಮಿ ಅವರು ಸ್ವಾತಂತ್ರ್ಯ ಹೋರಾಟಗಾರರು, ಹಿರಿಯರು. ಆದರೆ ಅವರ ಇತ್ತೀಚಿನ ಹೇಳಿಕೆಗಳು ತೀರಾ ಅಸಂಬದ್ಧವಾಗಿವೆ. ಅವರು ಜೆಡಿಎಸ್‌-ಕಾಂಗ್ರೆಸ್‌ ಪರ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಗತಿಪರರ ಹೆಸರಿನಲ್ಲಿ ದೊರೆಸ್ವಾಮಿ ಅವರು ರಾಜಕೀಯ ಮಾಡುತ್ತಿದ್ದಾರೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಮನೆಯಿಂದ ಏನು ಹುಕುಂ ಬರುತ್ತದೆಯೋ ಅದನ್ನು ದೊರೆಸ್ವಾಮಿ ತುತ್ತೂರಿ ಊದುತ್ತಾರೆ. ಹಿರಿಯರಾಗಿ ದೇಶದ ಬಗ್ಗೆ ಚಿಂತನೆ ಮಾಡಬೇಕು ಎಂದು ಹೇಳಿದರು.

ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿರುವುದು ದಿಟವಾಗಿದೆ. ಆದರೆ ಯತ್ನಾಳ್‌ ಹೇಳಿಕೆ ಹಿಂಪಡೆಯದಿದ್ದರೆ ವಿಧಾನಸಭೆ ಕಲಾಪ ನಡೆಯಲು ಬಿಡುವುದಿಲ್ಲ ಎಂದು ಕಾಂಗ್ರೆಸ್‌ನವರು ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್‌ನವರು ದೊರೆಸ್ವಾಮಿಯವರ ಕಡೆ ವಕಾಲತ್ತು ವಹಿಸುತ್ತಿದ್ದಾರೆ ಎಂದು ದೂರಿದರು. ನನ್ನ ಪ್ರಕಾರ ದೇಶ ವಿರೋಧಿ ಹೇಳಿಕೆ ನೀಡುವವರನ್ನು ಗುಂಡಿಕ್ಕಿ ಕೊಲ್ಲಬೇಕು, ಇಲ್ಲವೇ ಗಲ್ಲಿಗೇರಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next