Advertisement

ದೋರನಹಳ್ಳಿ ಗ್ಯಾಸ್ ಸಿಲಿಂಡರ್ ದುರಂತ : ಮತ್ತೊಂದು ಮಗು ಸಾವು, ಸಾವಿನ ಸಂಖ್ಯೆ 5 ಕ್ಕೆ ಏರಿಕೆ

07:32 PM Feb 28, 2022 | Team Udayavani |

ಶಹಾಪುರ : ತಾಲೂಕಿನ ದೋರನಹಳ್ಳಿ ಗ್ರಾಮದ ಯುಕೆಪಿ ಕ್ಯಾಂಪ್ ನಲ್ಲಿ ಸೀಮಂತ ಕಾರ್ಯಕ್ರಮವೊಂದರಲ್ಲಿ ಸಿಲಿಂಡರ್ ಸ್ಪೋಟದಿಂದ ನಡೆದ ಅನಾಹುತದಲ್ಲಿ ಸೋಮವಾರ ಚಿಕಿತ್ಸೆ ಫಲಕಾರಿಯಾಗದೆ ಮತ್ತೊಂದು 6 ವರ್ಷದ ಮಗು‌‌ ಸಾವನ್ನಪ್ಪಿದೆ.

Advertisement

ಸಿಲಿಂಡರ್ ಸ್ಪೋಟದಿಂದ ಈ ಮಗುವಿನ ಮೈಮೇಲಿನ ಚರ್ಮ ಕಾಣದಂತಾಗಿತ್ತು. ಬೆಂಕಿಗೆ ಮೈ ಮೇಲಿನ ಚರ್ಮ ಸುಟ್ಟು ಒಳಪದರು ಕಂಡಿದ್ದ ಗ್ರಾಮದ ಮಾತೃ ಹೃದಯಿಗಳು ಆ ದುರ್ಘಟನೆಯ ಕಹಿ ನೆನಪಿನಿಂದ ಇನ್ನೂ ಹೊರ ಬಂದಿಲ್ಲ.

ಒಟ್ಟು 23 ಜನ ಗಾಯಗೊಂಡಿದ್ದು,‌ ಇಂದು‌ ಮತ್ತೊಂದು ಮಗು ಶ್ವೇತಾ (6) ಮೃತ ಪಟ್ಟಿದ್ದು ದುರಂತದಲ್ಲಿ 5 ಜನ ಮೃತಪಟ್ಟಂತಾಗಿದೆ.

ಇನ್ನೂ ಮೂರು ರಿಂದ ನಾಲ್ಕು ಜನರ ಸ್ಥಿತಿ ಗಂಭೀರವಿದೆ ಎನ್ನಲಾಗಿದೆ. ಇಡಿ ಗಾಮದ ತುಂಬಾ ಸ್ಮಶಾನ ಮೌನ ಆವರಿಸಿದೆ.

ಇದನ್ನೂ ಓದಿ : ಆನೆಗೊಂದಿ ಭಾಗದಲ್ಲಿ ಹೊಟೇಲ್ ಗಳಿಗೆ ನಿಷೇಧ: ಹಂಪಿ ಭಾಗದಲ್ಲಿ ಭರ್ಜರಿ ವ್ಯಾಪಾರ ವಹಿವಾಟು

Advertisement
Advertisement

Udayavani is now on Telegram. Click here to join our channel and stay updated with the latest news.

Next