Advertisement

ಆತಂಕ ಬೇಡ; ಆದರೆ ಎಚ್ಚರಿಕೆಯಂತೂ ಬೇಕು

12:21 AM Oct 27, 2021 | Team Udayavani |

ಇನ್ನೇನು ಕೋವಿಡ್‌ ಹಾವಳಿ ಮುಗಿದೇ ಹೋಯಿತು ಎನ್ನುವಷ್ಟರಲ್ಲಿ ಜಗತ್ತಿನ ಹಲವು ಭಾಗಗಳಲ್ಲಿ ಸೋಂಕಿನ ಎ.ವೈ.4.2 ಕಾಣಿಸಲಾರಂಭಿಸಿದೆ.

Advertisement

ಹೀಗಾಗಿ ಮತ್ತೆ ಲಾಕ್‌ಡೌನ್‌ ಸೇರಿದಂತೆ ಹಲವು ಪ್ರತಿಬಂಧಕ ಕ್ರಮಗಳು ಜಾರಿಯಾಗಲಿದೆಯೇ ಎಂಬ ದುಗುಡ ಸಹಜವೇ. ರಾಜ್ಯದಲ್ಲಿ ಕೂಡ ಇದುವರೆಗಿನ ಮಾಹಿತಿ ಪ್ರಕಾರ ಎರಡು ಕೇಸುಗಳು ದೃಢಪಟ್ಟಿದೆ. ಆದರೆ ದೇಶವಾಸಿಗಳು ಆತಂಕಪಡುವ ಅಗತ್ಯವಿಲ್ಲ. ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಹೊಸ ರೂಪಾಂತರಿ ಪತ್ತೆಯಾಗಿದ್ದರೂ ಅದನ್ನು “ಇನ್ನೂ ಅಧ್ಯಯನ ದಲ್ಲಿರುವ ಹಂತದ ರೂಪಾಂತರಿ’ ಎಂದೇ ಉಲ್ಲೇಖಿಸಿದ್ದಾರೆ.ಇದರ ಜತೆಗೆ ರಾಜ್ಯ ಸಹಿತ ದೇಶದ ಹಲವು ಭಾಗಗಳಲ್ಲಿ ಪತ್ತೆಯಾಗಿರುವ ಎ.ವೈ.4.2 ರೂಪಾಂತರಿ ಸೆಪ್ಟಂಬರ್‌ನಲ್ಲಿ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಇದ್ದ ವೇಳೆ ನಡೆಸಲಾಗಿದ್ದ ಮಾದರಿಗಳ ಅಧ್ಯಯನದಿಂದ ದೃಢಪಟ್ಟದ್ದು ಎಂದು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ವರದಿ ಹೇಳಿದೆ. ಹೀಗಾಗಿ ಇದೊಂದು ಸಮಾಧಾನದ ವಿಚಾರ. ಹೊಸ ರೂಪಾಂತರಿಯ ಸವಾಲಿನ ಬಗ್ಗೆ ಕೇಂದ್ರ ಸರಕಾರ ಕೂಡ ತತ್‌ಕ್ಷಣ ಕಾರ್ಯಪ್ರವೃತ್ತವಾಗಿದೆ.

ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿಯ ವಿಜ್ಞಾನಿ ಡಾ| ಸಮೀರನ್‌ ಪಾಂಡಾ ಪ್ರಕಾರ ಸೋಂಕಿನ ಎರಡನೇ ಅವಧಿಯಲ್ಲಿ ಕಂಡು ಬಂದಂತೆ ಹಾನಿಕಾರ ಫ‌ಲಿತಾಂಶ ನೀಡುವುದಿಲ್ಲ. ಆದರೆ ಕ್ಷಿಪ್ರವಾಗಿ ಹರಡುತ್ತದೆ ಎಂಬ ಅಂಶವನ್ನು ಪುಷ್ಟೀಕರಿಸಿದ್ದಾರೆ.

ಹೀಗಾಗಿ ನಾವೆಲ್ಲರೂ ರಾಜ್ಯ ಮತ್ತು ಕೇಂದ್ರ ಸರಕಾರಗಳು ಈಗಾಗಲೇ ಜಾರಿಗೊಳಿಸಿರುವ ಸೋಂಕು ಪ್ರತಿಬಂಧಕ ನಿಯಮಗಳನ್ನು ಚಾಚೂ ತಪ್ಪದೆ ಅನುಸರಿಸಿ, ಮತ್ತಷ್ಟು ಸೋಂಕಿನ ಪ್ರಭಾವ ತಗ್ಗಿಸಲು ನೆರವಾಗು ವುದು ಆದ್ಯ ಕರ್ತವ್ಯವೇ ಆಗಿದೆ.

ವೈರಸ್‌ನ ರೂಪಾಂತರ ಎನ್ನುವುದು ಸಾಮಾನ್ಯ ಪ್ರಕ್ರಿಯೆ. ಈ ಅಂಶವನ್ನು ಹಿಂದಿನ ಅವಧಿಗಳಲ್ಲಿ ಕೇಂದ್ರ ಸರಕಾರದ ಪರಿಣತರ ಸಮಿತಿ ಸ್ಪಷ್ಟಪಡ ಸಿದ್ದರೂ ಮತ್ತೂಮ್ಮೆ ಅದನ್ನು ನಾವೆಲ್ಲರೂ ಮನಗಾಣಬೇಕಾಗಿದೆ. ಕೆಲವು ದಿನಗಳ ಹಿಂದಷ್ಟೇ ಮುಕ್ತಾಯವಾದ ದಸರಾ ಸಂದರ್ಭ ಹೆಚ್ಚಿನ ವರು ಮನೆಯಲ್ಲಿಯೇ ಹಬ್ಬ ಆಚರಿಸಿದ್ದರು. ಅದೇ ನಿಲುವನ್ನು ಮುಂದಿನ ತಿಂಗಳ ಮೊದಲ ವಾರದಲ್ಲಿ ಬರುವ ದೀಪಾವಳಿಗೂ ಅನುಸರಿಸ ಬೇಕಾ ಗಿದೆ. ಈ ಮೂಲಕ ವೈರಸ್‌ ಹರಡುವುದನ್ನು ತಡೆಯುವುದಕ್ಕೆ ಕೂಡ ನಮ್ಮದೇ ಆದ ಕೊಡುಗೆ ಕೊಡಬೇಕಾದದ್ದು ಕರ್ತವ್ಯವೇ ಆಗಿದೆ.

Advertisement

ಇದನ್ನೂ ಓದಿ:ಗೆಲುವಿನ ಓಟ ಮುಂದುವರಿಸಿದ ಪಾಕಿಸ್ಥಾನ

ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ಅಧ್ಯಯನದ ಪ್ರಕಾರ ಎ.ವೈ.4.2 ರೂಪಾಂತರಿಯಲ್ಲದೆ, ಎ.ವೈ. 33, ಎ.ವೈ.4.1 ಎಂಬ ಮತ್ತೆ ಎರಡು ಹೊಸ ವರ್ಗೀಕರಣವೂ ಇದೆ. ಹೀಗಾಗಿ ಸಮಾಧಾನದ ಜತೆಗೆ ಎಲ್ಲರೂ ಎಚ್ಚರಿಕೆಯಿಂದಲೇ ಇರುವ ಅನಿವಾರ್ಯತೆ ಉಂಟಾಗಿದೆ. ವಿಜ್ಞಾನಿಗಳ ಕ್ಷಿಪ್ರ ಸಂಶೋಧನೆಯಿಂದಾಗಿ ಪಿಡುಗಿನ ವಿರುದ್ಧ ಲಸಿಕೆ ಸಿದ್ಧಗೊಂಡಿದೆ. ಕೆಲವು ದಿನಗಳ ಹಿಂದಷ್ಟೇ 100 ಕೋಟಿ ಡೋಸ್‌ ಲಸಿಕೆ ನೀಡಿ ದಾಖಲೆಯನ್ನೂ ಬರೆಯಲಾಗಿದೆ. ಈ ಪೈಕಿ ಮೊದಲ ಡೋಸ್‌ ಪಡೆದಿರುವವರ ಸಂಖ್ಯೆ ಹೆಚ್ಚು. ಸೋಂಕಿನಿಂದ ಉಂಟಾಗುವ ಪ್ರತಿಕೂಲ ಪರಿಣಾಮ ತಡೆಯಬೇಕಾಗಿದೆ. ಜತೆಗೆ ಶೀಘ್ರದಲ್ಲಿಯೇ ಚಳಿಗಾಲವೂ ಆರಂಭವಾಗುವುದರಿಂದ ನಾವೆಲ್ಲರೂ ಗರಿಷ್ಠ ಎಚ್ಚರಿಕೆ ವಹಿಸಬೇಕು. ಇದರ ಜತೆಗೆ ನಮ್ಮ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಅದಕ್ಕಾಗಿ ವೈಯಕ್ತಿಕ ಶುಚಿತ್ವ, ಸಾರ್ವಜನಿಕವಾಗಿಯೂ ಕಸ, ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯದೆ ಅದನ್ನು ವಿಲೇವಾರಿ ಮಾಡಲು ಸ್ಥಳೀಯ ಸಂಸ್ಥೆಗಳ ಜತೆಗೆ ನಾವೂ ಕೈಜೋಡಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next