Advertisement

ಜೆ.ಎನ್.ಯು.ವನ್ನು ನಿರಾಶ್ರಿತರ ಶಿಬಿರವನ್ನಾಗಿಸಬೇಡಿ; ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಸೂಚನೆ

08:55 AM Mar 01, 2020 | Team Udayavani |

ನವದೆಹಲಿ: ಇತ್ತೀಚೆಗೆ ನಗರದಲ್ಲಿ ನಡೆದ ಹಿಂಸಾಚಾರದಲ್ಲಿ ಮನೆ ಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಿರುವವರನ್ನು ಆಶ್ರಯ ಪಡೆದುಕೊಳ್ಳಲು ಜವಹರಲಾಲ್ ವಿಶ್ವವಿದ್ಯಾನಿಲಯದ ಕ್ಯಾಂಪಸ್ ಗೆ ಆಹ್ವಾನಿಸದಂತೆ ಇಲ್ಲಿನ ವಿದ್ಯಾರ್ಥಿಗಳಿಗೆ ಜೆ.ಎನ್.ಯು. ಉಪ ಕುಲಪತಿ ಜಗದೀಶ್ ಕುಮಾರ್ ಅವರು ಸಲಹೆ ನೀಡಿದ್ದಾರೆ.

Advertisement

‘ದೆಹಲಿಯಲ್ಲಿ ಶಾಂತಿ ಮತ್ತು ಸೌಹಾರ್ಧತೆ ನೆಲೆಗೊಳ‍್ಳುವುದು ಅತೀ ಮುಖ್ಯವಾಗಿದೆ ಮತ್ತು ಹಿಂಸಾಚಾರದಲ್ಲಿ ಸಂತ್ರಸ್ತರಾದವರಿಗೆ ಎಲ್ಲಾ ರೀತಿಯ ಸಹಾಯಗಳನ್ನು ನೀಡುವುದು ಮಾನವೀಯತೆಯೂ ಹೌದು. ಆದರೆ ನಮ್ಮ ವಿಶ್ವವಿದ್ಯಾನಿಲಯದ ಕೆಲವು ವಿದ್ಯಾರ್ಥಿಗಳು ಕೆಲ ನಿರಾಶ್ರಿತರನ್ನು ಕ್ಯಾಂಪಸ್ ನಲ್ಲಿ ಬಂದು ಇರುವಂತೆ ಆಹ್ವಾನಿಸಿದ್ದಾರೆ. ಜನವರಿಯಲ್ಲಿ ನಡೆದಿದ್ದ ಅಹಿತಕರ ಘಟನೆಗಳ ಸಂದರ್ಭದಲ್ಲಿ ಹೊರಗಿನವರು ಕ್ಯಾಂಪಸ್ ಗೆ ಬಂದಿದ್ದರು ಮತ್ತು ಅಂದಿನ ಘಟನೆಗಳಿಗೆ ಅವರೇ ಕಾರಣ ಎಂದು ಆರೋಪ ಮಾಡಿದ್ದ ವಿದ್ಯಾರ್ಥಿಗಳೇ ಇಂದು ಹೊರಗಿನವರನ್ನು ಕ್ಯಾಂಪಸ್ ನಲ್ಲಿ ಬಂದು ಇರುವಂತೆ ಹೇಳುತ್ತಿದ್ದಾರೆ’ ಎಂದು ಜಗದೀಶ್ ಕುಮಾರ್ ಎ.ಎನ್.ಐ. ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.

ಗಲಭೆ ಸಂತ್ರಸ್ತರಿಗೆ ಮಾನವೀಯ ನೆರವು ನಿಡುವುದರಲ್ಲಿ ಯಾವುದೇ ಅಪರಾಧವಿಲ್ಲ ಆದರೆ ಇದೇ ಸಂದರ್ಭದಲ್ಲಿ ಕ್ಯಾಂಪಸ್ ನ ಭದ್ರತೆ ಮತ್ತು ಸುರಕ್ಷತೆಯೂ ಅಷ್ಟೇ ಮುಖ್ಯವಾದುದು ಎಂದು ಜಗದೀಶ್ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ದೆಹಲಿ ಹಿಂಸಾಚಾರ ಪೀಡಿತರನ್ನು ಕ್ಯಾಂಪಸ್ ನಲ್ಲಿ ಬಂದು ಇರುವಂತೆ ಕರೆ ನೀಡುವಂತಿಲ್ಲ ಎಂದು ಕಾಲೇಜು ಆಡಳಿತ ಮಂಡಳಿಯು ಸೂಚನೆ ಹೊರಡಿಸಿದ ಒಂದು ದಿನದ ಬಳಿಕ ಜಗದೀಶ್ ಅವರ ಈ ಅಭಿಪ್ರಾಯ ಹೊರಬಿದ್ದಿದೆ.

Advertisement

Udayavani is now on Telegram. Click here to join our channel and stay updated with the latest news.

Next