Advertisement

Vijayapura ಕನ್ನಡಿಗರನ್ನು ಕೆರಳಿಸಬೇಡಿ : ಯತ್ನಾಳ ಎಚ್ಚರಿಕೆ

06:48 PM Nov 01, 2023 | |

ವಿಜಯಪುರ : ಮಹಾರಾಷ್ಟ್ರ ರಾಜ್ಯದಲ್ಲಿ ಮರಾಠಿ ಮೀಸಲು ಹೋರಾಟದ ನೆಪದಲ್ಲಿ ಕರ್ನಾಟಕದ ಸಾರಿಗೆ ಸಂಸ್ಥೆಗಳ ಬಸ್‍ಗಳಿಗೆ ಬೆಂಕಿ ಹಚ್ಚುವ ಮೂಲಕ ಕನ್ನಡಿಗರನ್ನು ಕೆರಳಿಸುವ ಕೆಲಸ ಮಾಡಲಾಗುತ್ತಿದೆ. ಅನಗತ್ಯವಾಗಿ ಕನ್ನಡಿರನ್ನು ಕೆರಳಿಸಬೇಡಿ ಎಂದು ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಎಚ್ಚರಿಸಿದ್ದಾರೆ.

Advertisement

ಬುಧವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಬಸ್‍ಗಳಿಉಗೆ ಬೆಂಕಿ ಹಚ್ಚಿರುವ ಕೃತ್ಯ ಖಂಡನಾರ್ಹ. ಮರಾಠಿ ಮೀಸಲಾತಿಗೆ ಹೋರಾಟ ಮಾಡಬೇಕೆ ಹೊರತು, ಕರ್ನಾಟಕದ ಬಸ್‍ಗಳಿಗೆ ಬೆಂಕಿ ಹಚ್ಚುವ ಕೆಲಸ ತರವಲ್ಲ ಎಂದು ಹರಿಹಾಯ್ದರು.

ಮಹಾರಾಷ್ಟ್ರದಲ್ಲಿನ ಮರಾಠ ಮೀಸಲು ಹೋರಾಟ ಮಹಾರಾಷ್ಟ್ರ ಸರ್ಕಾರದ ವಿರುದ್ದ ಇರಬೇಕೆ ಹೊರತು, ಕರ್ನಾಟಕ ರಾಜ್ಯದ ಆಸ್ತಿ ಹಾನಿ ಮಾಡುವ ಹಾಗೂ ಕನ್ನಡಿಗರ ಮೇಲೆ ಹರಿಹಾಯುವುದಲ್ಲ ಎಂದು ಕುಟುಕಿದರು.

ಕರ್ನಾಟಕ ಮಹಾರಾಷ್ಟ್ರ ರಾಜ್ಯಗಳ ಮಧ್ಯೆ ಕೌಟುಂಬಿಕ ಬಾಂಧವ್ಯಗಳಿವೆ, ಕರ್ನಾಟಕದ ಜನರು ವೈದ್ಯಕೀಯ ಸೇವೆಗಾಗಿ ಮಹಾರಾಷ್ಟ್ರದ ರಾಜ್ಯದ ಹಲವು ನಗರಗಳಿಗೆ ಹೋಗುತ್ತಾರೆ. ಮರಾಠಿ ಮೀಸಲು ಹೋರಾಟದ ನೆಪದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ನಡೆಸಿದರೆ ಸಮಸ್ಯೆ ಸೃಷ್ಟಿಯಾಗಲಿದೆ ಎಂದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next