Advertisement

ಆಧಾರ್‌ ಇಲ್ಲದವರಿಗೂ ಸಾಮಾಜಿಕ ಭದ್ರತೆಯ ಲಾಭ ಕೊಡಿ: ಸುಪ್ರೀಂ

07:20 PM Feb 08, 2018 | Team Udayavani |

ಹೊಸದಿಲ್ಲಿ : ಆಧಾರ್‌ ಕಾರ್ಡ್‌ ಹೊಂದಿಲ್ಲದಿರುವ ಕಾರಣಕ್ಕೆ ಯಾರಿಗೂ ಸಾಮಾಜಿಕ ಭದ್ರತೆಯ ಲಾಭಗಳನ್ನು ನಿರಾಕರಿಸಬಾರದು ಎಂದು ಸುಪ್ರೀಂ ಕೋರ್ಟ್‌ ಕೇಂದ್ರ ಸರಕಾರಕ್ಕೆ ಹೇಳಿದೆ.

Advertisement

ಆಧಾರ್‌ ಕಾರ್ಡ್‌ ಇಲ್ಲದವರಿಗೆ ಅವರ ಇತರ ಅಧಿಕೃತ ಗುರುತು ಪತ್ರಗಳ ಆಧಾರದ ಮೇಲೆ ಸಾಮಾಜಿಕ ಭದ್ರತೆಯ ಲಾಭಗಳನ್ನು ಸರಕಾರ ನೀಡಬೇಕು ಎಂದು ಕೋರ್ಟ್‌ ಹೇಳಿತು.

ವರಿಷ್ಠ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಎ ಕೆ ಸಿಕ್ರಿ, ಎ ಎಂ ಕಾನ್‌ವಿಲ್ಕರ್‌, ಡಿ ವೈ ಚಂದ್ರಚೂಡ್‌ ಮತ್ತು ಅಶೋಕ್‌ ಭೂಷಣ್‌ ಅವರನ್ನು ಒಳಗೊಂಡ ಐವರು ಸದಸ್ಯರ ಸಾಂವಿಧಾನಿಕ ನ್ಯಾಯ ಪೀಠ ತನ್ನ ಈ ಸೂಚನೆಯನ್ನು ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರಿಗೆ ಬಾಯ್ದೆರೆಯಾಗಿ ನೀಡಿತು. 

ಇದಕ್ಕೆ ಮುನ್ನ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು ತಮ್ಮ ವಾದ ಮಂಡಿಸುತ್ತಾ “ಇಂದಿಗೂ ಆಧಾರ್‌ ಕಾರ್ಡ್‌ ಇಲ್ಲದವರಿಗೆ ಸರಕಾರದ ಸಾಮಾಜಿಕ ಭದ್ರತೆಯ ಲಾಭಗಳನ್ನು ನಿರಾಕರಿಸಲಾಗುತ್ತಿದೆ’ ಎಂದು ಕೋರ್ಟಿಗೆ ಹೇಳಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next