Advertisement
ರಾಜ್ಯದಲ್ಲಿ 3 ಸಮುದಾಯಗಳು ಮೀಸಲಾತಿ ಗಾಗಿ ಹೋರಾಟ ನಡೆಸುತ್ತಿವೆ. ಇನ್ನೂ ಅನೇಕ ಸಮುದಾಯಗಳು ಒತ್ತಡ ಹೇರುವ ಪ್ರಯತ್ನ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ವರಿಷ್ಠರ ಸೂಚನೆ ಮಹತ್ವ ಪಡೆದಿದೆ.
Related Articles
ವೀರಶೈವ ಲಿಂಗಾಯತ ಸಮುದಾಯಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸದೆ ಇದ್ದರೆ ಕೇಂದ್ರ ಸರಕಾರದ ಬಗ್ಗೆ ಆ ಸಮುದಾಯಕ್ಕೆ ತಪ್ಪು ಅಭಿಪ್ರಾಯ ಉಂಟಾಗಿ, ರಾಜಕೀಯವಾಗಿ ಪಕ್ಷಕ್ಕೂ ತೊಂದರೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
Advertisement
ತಜ್ಞರು ಹೇಳುವುದೇನು?ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ರಾಜ್ಯ ಹಿಂ. ವರ್ಗಗಳ ಆಯೋಗಕ್ಕೆ ಅಧಿಕಾರ ಇದೆ. ಆದರೆ ಪ್ರವರ್ಗ 2ಎಯಲ್ಲಿರುವ ಹಿಂ. ಸಮುದಾಯಗಳಿಗೆ ಹೋಲಿಸಿದಾಗ ಸಾಮಾಜಿಕ – ಶೈಕ್ಷಣಿಕವಾಗಿ ಆ ಸಮುದಾಯ ಹಿಂದುಳಿದಿರುವುದಕ್ಕೆ ಪೂರಕ ದಾಖಲೆಗಳಿರಬೇಕು. ಹಿಂ. ವರ್ಗಕ್ಕೆ ಸೇರಿಸಲು ಬಡತನವಷ್ಟೇ ಮಾನದಂಡವಲ್ಲ. ರಾಜ್ಯ ಹಿಂ. ವರ್ಗಗಳ ಆಯೋಗವು ಪಂಚಮಸಾಲಿ ಸಮುದಾಯವು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವಿಕೆಯ ಅಧ್ಯಯನ ಮಾಡಿ ವರದಿ ನೀಡಬೇಕಿದೆ.