Advertisement

ಪ್ರವಾಹದ ನಡುವೆಯೂ ಡೋಣಿ ನದಿ ದಾಟಲು ಹೋದ ವ್ಯಕ್ತಿ ನೀರು ಪಾಲು : ಶೋಧ ಕಾರ್ಯ

04:34 PM Sep 22, 2021 | sudhir |

ವಿಜಯಪುರ: ಸತತ ಮಳೆಯಿಂದಾಗಿ ತುಂಬಿ ಹತಿಯುತ್ತಿರುವ ಡೋಣಿ ನದಿಯನ್ನು ತಾಳಿಕೋಟೆ ಪಟ್ಟಣದ ಬಳಿ ದಾಟಲು ಮುಂದಾದ ವ್ಯಕ್ತಿಯೊಬ್ಬ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ.

Advertisement

ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ಘಟನೆ ನಡೆದಿದ್ದು ಕೊಚ್ಚಿಕೊಂಡು ಹೋದ ವ್ಯಕ್ತಿಯನ್ನು ಸ್ಥಳೀಯ ನಿವಾಸಿ ಇಬ್ರಾಹೀಂ ಬೇಪಾರಿ (55) ಎಂದು ಗುರುತಿಸಲಾಗಿದೆ.

ತಾಳಿಕೋಟೆ ಪುನರ್ವಸತಿ ಹಡಗಿನಾಳ ಗ್ರಾಮದ ಮಧ್ಯ ಹರಿಯುತ್ತಿರುವ ಡೋಣಿ ನದಿ ದಾಟುವಾಗ ಈ ಘಟನೆ ಜರುಗಿದೆ.

ಮಧ್ಯದ ನಡೆಯಲ್ಲಿ ನದಿ ದಾಟುವ ಹುಂಬತನಕ್ಕೆ ಮುಂದಾದಾಗ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.

ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಆಗಮಿಸಿದ ತಾಳಿಕೋಟೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಇಬ್ರಾಹೀಂನ ಶೋಧ ಕಾರ್ಯ ನಡೆಸಿದ್ದಾರೆ.

Advertisement

ಇದನ್ನೂ ಓದಿ : ದೇಶದಲ್ಲಿನ ಬೃಹತ್ ಮತಾಂತರ ಜಾಲ ಭೇದಿಸಿದ ಉತ್ತರಪ್ರದೇಶದ ಎಟಿಎಸ್; ಮೌಲಾನಾ ಸಿದ್ದಿಖಿ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next