Advertisement

ಕೋವಿಡ್ ಕಂಟಕ: ನೆರವಿನ ಹಸ್ತ; ಉತ್ತರಕ್ರಿಯೆ ವೆಚ್ಚದ ಮೊತ್ತ ದೇಣಿಗೆ

10:13 AM May 02, 2020 | mahesh |

ಕಾಸರಗೋಡು: ತಾಯಿಯ ಮರಣಾನಂತರದ ವಿಧಿಗಳನ್ನು ಪೂರೈಸಲು ತೆಗೆದಿರಿಸಿದ್ದ ಮೊಬಲಗನ್ನು ಮುಖ್ಯಮಂತ್ರಿಗಳ ದುರಂತ ನಿವಾರಣೆ ನಿಧಿಗೆ ಹಸ್ತಾಂತರಿಸುವ ಮೂಲಕ ಮಕ್ಕಳು ಮಾದರಿಯಾಗಿದ್ದಾರೆ.

Advertisement

ಕಾಸರಗೋಡಿನ ಪಾಡಿ ನಿವಾಸಿ ಕುಂಞಿಕೃಷ್ಣನ್‌ ನಾಯರ್‌, ಕಾತ್ಯಾಯಿನಿ ಅಮ್ಮ, ಮಾಧವನ್‌ ಪಾಡಿ ಅವರು ಈ ಮಾದರಿ ಕಾರ್ಯದ ಮೂಲಕ ಗಮನಸೆಳೆದವರು. ಮಾ. 12ರಂದು ಅವರ ತಾಯಿ ಅಚ್ಚಾನಡ್ಕ ಅಮ್ಮಾರ್‌ ಕುಂಞಿಯಮ್ಮ ನಿಧನಹೊಂದಿದ್ದರು. ಮಕ್ಕಳು ಉತ್ತರ ಕ್ರಿಯೆಗೆ ಒಂದು ಲಕ್ಷ ರೂ. ವೆಚ್ಚವಾ ಗುವ ನಿರೀಕ್ಷೆ ಹೊಂದಿದ್ದರು. ಆದರೆ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸರಳವಾಗಿ ಕಾರ್ಯಕ್ರಮ ನಡೆಸಿದ ಕಾರಣ ಕಾದಿರಿಸಿದ ಮೊತ್ತವನ್ನು ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ಅವರ ಮೂಲಕ ಮುಖ್ಯಮಂತ್ರಿ ನಿಧಿಗೆ ಹಸ್ತಾಂತರಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next