Advertisement

ವೈದ್ಯರ ನಾಯಿ ಕಳವು : ಶಿವಮೊಗ್ಗ ಪೊಲೀಸರಿಂದ ಕೆಲವೇ ಗಂಟೆಗಳೊಳಗೆ ಪತ್ತೆ

01:35 PM Dec 06, 2021 | Vishnudas Patil |

ಶಿವಮೊಗ್ಗ: ನಗರದಲ್ಲಿ ವೈದ್ಯರೊಬ್ಬರ ನಾಯಿ ಕಳವಾಗಿದ್ದು ಕೆಲವೇ ಗಂಟೆಗಳಲ್ಲಿ ಪೊಲೀಸರು ಪತ್ತೆ ಹಚ್ಚಿದ ಘಟನೆ ನಡೆದಿದೆ.

Advertisement

ಬೀಗಲ್ ತಳಿಯ ನಾಯಿ ಮರಿ ಕಳವಾಗಿದೆ ಎಂದು ಜಯನಗರ ಠಾಣೆಯಲ್ಲಿ ವೈದ್ಯ ಪರಮೇಶ್ವರ್ ದೂರು ದಾಖಲಿಸಿದ್ದರು.

ಶಿವಮೊಗ್ಗದ ರಾಜೇಂದ್ರನಗರ ನಿವಾಸಿಯಾಗಿರುವ ಡಾ.ಪರಮೇಶ್ವರ್ ಅವರ ಮನೆಯಲ್ಲಿದ್ದ ನಾಯಿಯನ್ನು ಅಪರಿಚಿತರು ಕದ್ದೋಯ್ಯುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು.

ಸಿಸಿ ಟಿವಿ ದೃಶ್ಯ ಆಧರಿಸಿ, ನಾಯಿ ಕದ್ದೋಯ್ದವರನ್ನು, ಕಳವಾದ ನಾಯಿಯನ್ನು ಕೆಲವೇ ಗಂಟೆಯಲ್ಲಿ ಜಯನಗರ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ.

ನಾಯಿಯನ್ನು ವಾರಸುದಾರರಿಗೆ ಪೊಲೀಸರು ಹಸ್ತಾಂತರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next