Advertisement

ವೈದ್ಯರ ಮುಷ್ಕರ 5 ನೇ ದಿನ:ನವವಿವಾಹಿತ,8ಕ್ಕೂ ಹೆಚ್ಚು ಬಲಿ

12:20 PM Nov 17, 2017 | |

ಬೆಂಗಳೂರು: ಖಾಸಗಿ ಆಸ್ಪತ್ರೆಗಳ ನಿಯಂತ್ರಣ ವಿಧೇಯಕ ವಿಚಾರದಲ್ಲಿ ಸತತ 5 ನೇ ದಿನವೂ  ವೈದ್ಯರ ಪ್ರತಿಭಟನೆ ಮುಂದುವರಿದಿದ್ದು,ರಾಜ್ಯದ ವಿವಿಧೆಡೆ ಕಳೆದ 5 ದಿನಗಳಿಂದ ಸೂಕ್ತ  ಚಿಕಿತ್ಸೆ ಸಿಗದೆ ಸಾವನ್ನಪ್ಪಿರುವ ಸಂಖ್ಯೆ  ಶುಕ್ರವಾರ 50 ರ ಹತ್ತಿರಕ್ಕೆ ಬಂದಿದೆ. 

Advertisement

ರಾಜ್ಯ ಸರ್ಕಾರ ಹಾಗೂ ಮುಷ್ಕರ ನಡೆಸುತ್ತಿರುವ ಖಾಸಗಿ ಆಸ್ಪತ್ರೆಗಳ ವೈದ್ಯರ ಹಠಮಾರಿ ಧೋರಣೆಯಿಂದಾಗಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಗುರುವಾರವೊಂದೇ ದಿನ 17 ಮಂದಿ ಜೀವಕಳೆದುಕೊಂಡಿದ್ದರೆ, ಶುಕ್ರವಾರ 8 ಮಂದಿ ಸಾವನ್ನಪ್ಪಿದ್ದಾರೆ. 

ಸಿಎಂ ನಿರ್ಣಾಯಕ ಸಭೆ 
ಮುಷ್ಕರ ನಿರತ ವೈದ್ಯರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಧ್ಯಾಹ್ನ ನಿರ್ಣಾಯಕ ಸಭೆ ನಡೆಸಲಿದ್ದಾರೆ.

ಶುಕ್ರವಾರ 8 ಮಂದಿ ರಾಜ್ಯದ ವಿವಿಧೆಡೆ ಚಿಕಿತ್ಸೆ ದೊರಕದೆ ಪ್ರಾಣ ಕಳೆದುಕೊಂಡಿದ್ದು, ಈ ಪೈಕಿ ಗದಗದ ನವವಿವಾಹಿತನೂ ಸೇರಿದ್ದಾನೆ. ಡೇಂಘಿ  ಜ್ವರದಿಂದ ಬಳಲುತ್ತಿದ್ದ ಗಜೇಂದ್ರಘಡದ  ರವಿ ಭಜಂತ್ರಿ (22) ಎಂಬಾತ ಚಿಕಿತ್ಸೆ ಸಿಗದೆ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಸರ್ಕಾರಿ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರವಿಗೆ ಹೆಚ್ಚಿನ ಚಿಕಿತ್ಸೆ ಪಡೆಯಲು ವೈದ್ಯರು ಸೂಚಿಸಿದ್ದರು, ಆದರೆ ಸಕಾಲದಲ್ಲಿ ಚಿಕಿತ್ಸೆ ಲಭಿಸದೆ ಕೊನೆಯುಸಿರೆಳೆದಿದ್ದಾರೆ. ನವೆಂಬರ್‌ 12 ರಂದು ರವಿವಾರ ನಡೆದಿತ್ತು. 

ಶುಕ್ರವಾರ ಯಾದಗಿರಿಯಲ್ಲಿ ಇಬ್ಬರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ರೈತ ಶಿವರಾಯ (62) ಎನ್ನುವವರು ಸೂಕ್ತ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದಾರೆ. ಬೆಳಗ್ಗೆ ಮಹಿಳೆಯೊಬ್ಬರು ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. 

Advertisement

ಪುತ್ತೂರು ವಿದ್ಯಾರ್ಥಿನಿ ಬಲಿ 

ಪುತ್ತೂರಿನಲ್ಲಿ ಕಿಡ್ನಿ ವೈಪಲ್ಯ ದಿಂದ ಬಳಲುತಿದ್ದ  ಕಾಲೇಜ್ ವಿದ್ಯಾರ್ಥಿನಿ ಪೂಜಾ ಎಂಬಾಕೆ ಸಕಾಲದಲ್ಲಿ ಚಿಕಿತ್ಸೆ ಸಿಗದೆ ಶುಕ್ರವಾರ ಬಲಿಯಾಗಿದ್ದಾಳೆ. . ಶುಕ್ರವಾರ ಬೆಳಿಗ್ಗೆ  ರೋಗ ಉಲ್ಬಣಗೊಂಡ  ಪೂಜಾಳನ್ನು ಎಂದಿನಂತೆ ಪುತ್ತೂರು ಸಿಟಿ ಅಸ್ಪತ್ರೆ ಗೆ ಕರೆ ತಂದಾಗ  ವೈದ್ಯರಿಲ್ಲದೆ ಚಿಕಿತ್ಸೆ ನೀಡಲು ಸಾಧ್ಯವಾಗಲಿಲ್ಲ. 

 ಕಬಕ ವಿದ್ಯಾಪುರ ನಿವಾಸಿಯಾಗಿರುವ  ಪೂಜಾ ಪುತ್ತೂರು ವಿವೇಕಾನಂದ  ಕಾಲೇಜಿನಲ್ಲಿ ದ್ವಿತೀಯ ಬಿ.ಕಾಂ.ವಿದ್ಯಾರ್ಥಿನಿ. ವಾರಕ್ಕೆ 2 ಬಾರಿ ಡಯಾಲಿಸೀಸ್ ಮಾಡಲಾಗುತಿತ್ತು,ಆದರೆ ಇಂದು  ವೈದ್ಯರ ಮುಷ್ಕರದಿಂದಾಗಿಡಯಾಲಿಸೀಸ್‌ ನಡೆಸುವುದು ಸಾಧ್ಯವಾಗಲಿಲ್ಲ. 

ಹೈಕೋರ್ಟ್‌ ಏನು ಹೇಳಲಿದೆ? 

ಇಂದು ಮಧ್ಯಾಹ್ನ 2.30 ಕ್ಕೆ ರಾಜ್ಯ  ಹೈಕೋರ್ಟ್‌ ಮುಷ್ಕರದ ವಿರುದ್ಧ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಲಿದೆ. 

ತುಂಬಿ ತುಳುಕಿತ್ತಿರುವ ಸರ್ಕಾರಿ ಆಸ್ಪತ್ರೆಗಳು 

ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರಕದಿರುವ ಕಾರಣ ರೋಗಿಗಳು ಸರ್ಕಾರಿ ಆಸ್ಪತ್ರೆಗಳತ್ತ ಮುಖ ಮಾಡಿದ್ದು, ರಾಜ್ಯದ ಎಲ್ಲೆಡೆ ಸರ್ಕಾರಿ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ.

ಓಪಿಡಿ ಸೇವೆ ಲಭ್ಯ 
ಬೆಂಗಳೂರು ಸೇರಿದಂತೆ ವಿವಿಧೆಡೆ ಶುಕ್ರವಾರ ಓಪಿಡಿ ಸೇವೆ ನೀಡಲಾಗುತ್ತಿದೆ. 

ಸದನದಲ್ಲೂ ತೀವ್ರ ಗದ್ದಲ

ಮುಷ್ಕರದಕುರಿತಾಗಿ  ಸರ್ಕಾರ ಯಾಕೆ ಕಾಲ ಹರಣ ಮಾಡುತ್ತಿದೆ ಎಂದು  ವಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌ ಸರ್ಕಾರವನ್ನುತರಾಟೆಗೆ ತೆಗೆದುಕೊಂಡಿದ್ದಾರೆ. 

ಕಣ್ಣೀರಿಟ್ಟ ವೈದ್ಯ 
ಇಂಡಿಯನ್‌ ಮೆಡಿಕಲ್‌ ಅಸೋಸಿಯೇಷನ್‌ನ ವೈದ್ಯರು ಜಂಟಿ ಸುದ್ದಿಗೋಷ್ಠಿ ನಡೆಸಿ  ಸರ್ಕಾರ ನಮ್ಮನ್ನು ವಿಧೇಯಕದ ಕುರಿತು ಚರ್ಚೆಗೆ ಕರೆಯುವುದಾಗಿ ಎದುರು ನೋಡುತ್ತಿದ್ದೇವೆ ಎಂದಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಡಾ.ಶಶಿಕಾಂತ ಕುರಗೋಡ ಅವರು ಕಣ್ಣೀರಿಟ್ಟ ಘಟನೆ ನಡೆಯಿತು . 

Advertisement

Udayavani is now on Telegram. Click here to join our channel and stay updated with the latest news.

Next