Advertisement

ಟಿಬಿ ಮಾಹಿತಿ ನೀಡದಿದ್ರೆ ಜೈಲು

07:30 AM Mar 22, 2018 | Team Udayavani |

ಹೊಸದಿಲ್ಲಿ: ವ್ಯಕ್ತಿಯೊಬ್ಬರಿಗೆ ಕ್ಷಯ ರೋಗ ಇರುವ ಮಾಹಿತಿ ತಿಳಿದಿದ್ದೂ ಅದನ್ನು ಸರಕಾರದ ಗಮನಕ್ಕೆ ತಾರದಿರುವ ವೈದ್ಯರಿಗೆ, ಆರೋಗ್ಯ ಇಲಾಖೆ ಸಿಬ್ಬಂದಿಗೆ ಅಥವಾ ಔಷಧ ತಜ್ಞರಿಗೆ ಕನಿಷ್ಟ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದೆಂದು ಕೇಂದ್ರ ಸರಕಾರ ಎಚ್ಚರಿಕೆ ನೀಡಿದೆ. ಇತ್ತೀಚೆಗಷ್ಟೇ, ಪ್ರಧಾನಿ ನರೇಂದ್ರ ಮೋದಿ 2025ರ ವೇಳೆಗೆ ಭಾರತವನ್ನು ಕ್ಷಯ ರೋಗ ಮುಕ್ತವಾಗಿಸಬೇಕೆಂದು ಕರೆ ನೀಡಿದ್ದರು. ಅದರ ಬೆನ್ನಲ್ಲೇ ಕೇಂದ್ರ ಆರೋಗ್ಯ ಇಲಾಖೆಯು ಈ ಎಚ್ಚರಿಕೆ ಪ್ರಕಟಿಸಿರುವುದು ಗಮನಾರ್ಹ. 

Advertisement

2017ರ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲೂಎಚ್‌ಒ) ವರದಿಯ ಪ್ರಕಾರ, ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಕ್ಷಯ ರೋಗಿಗಳನ್ನು (28 ಲಕ್ಷ) ಹೊಂದಿರುವ ದೇಶ ಎಂಬ ಹೆಸರು ಪಡೆದಿದೆ. ಕ್ಷಯದಿಂದಾಗಿ 2017ರಲ್ಲಿ 4,23,000 ಜನರು ಸಾವಿಗೀಡಾ ಗಿದ್ದು, ಪ್ರತಿ 1 ಲಕ್ಷ ಮಂದಿಗೆ 211 ಜನರು ಟಿಬಿಯ ಸೋಂಕಿಗೆ ತುತ್ತಾಗುತ್ತಿದ್ದಾರೆ. ಹಾಗಾಗಿ, ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರ, ಕ್ಷಯವನ್ನು ಭಾರತದಿಂದ ನಿರ್ಮೂಲನೆಗೊಳಿಸಲು ಪಣ ತೊಟ್ಟಿದೆ. 

2012ರಲ್ಲೇ ಕ್ಷಯ ರೋಗವನ್ನು ಪ್ರಕಟಾರ್ಹ ರೋಗವೆಂದು ಭಾರತ ಘೋಷಿಸಿದೆ. ಆದರೂ, ಹಲವಾರು ವೈದ್ಯಕೀಯ ಸಿಬ್ಬಂದಿ, ಈ ರೋಗ ಪತ್ತೆಯಾದ ಪ್ರಕರಣಗಳನ್ನು ಸರಕಾರಕ್ಕೆ ತಿಳಿಸುತ್ತಿಲ್ಲ. ಶೇ. 76ರಷ್ಟು ಮಾಹಿತಿ ಕೊರತೆಯಾಗುತ್ತಿದೆ. ಇದರಿಂದಾಗಿ ರೋಗ ನಿರ್ಮೂಲನೆ ಸಾಧ್ಯವಾಗುತ್ತಿಲ್ಲ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ. 

28ಲಕ್ಷ  ಭಾರತದಲ್ಲಿರುವ ಕ್ಷಯ ರೋಗಿಗಳು
4.2ಲಕ್ಷ  ಕಳೆದ ವರ್ಷ ಕ್ಷಯದಿಂದ ಸಾವನ್ನಪ್ಪಿದವರು
211ಪ್ರತಿ 1 ಲಕ್ಷ ಜನರಲ್ಲಿ ಸೋಂಕಿಗೆ ತುತ್ತಾಗುತ್ತಿರುವವರು

Advertisement

Udayavani is now on Telegram. Click here to join our channel and stay updated with the latest news.

Next