Advertisement

ಹಳ್ಳಿ ಕಡೆ ವೈದ್ಯರ ನಡೆ ಯೋಜನೆಯಿಂದ ಗ್ರಾಮಗಳಿಗೆ ಸಹಾಯ

03:19 AM Jun 10, 2021 | Team Udayavani |

ಗ್ರಾಮೀಣ ಭಾಗದಲ್ಲಿ ಕೊರೊನಾ ಹರಡುವಿಕೆ ನಿಯಂತ್ರಣ ಹಾಗೂ ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚಿ ಸಕಾಲಕ್ಕೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಮನ್ವಯದೊಂದಿಗೆ ರಾಜ್ಯ ಸರ ಕಾ ರ ರೂಪಿಸಿದ ವೈದ್ಯರ ನಡಿಗೆ ಹಳ್ಳಿಗಳತ್ತ ಯಶಸ್ವಿ ಕಂಡಿರುವುದು ಉತ್ತಮ ಬೆಳವಣಿಗೆ.

Advertisement

ಏಕೆಂದರೆ, ಎರಡನೇ ಅಲೆ ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚು ಹರಡಿ ಆತಂಕದ ವಾತಾವರಣ ನಿರ್ಮಾಣ ವಾಗಿತ್ತು. ಹೋಂ ಐಸೊಲೇಶನ್‌ ಸೇರಿ ಗುಣಮಟ್ಟದ ಚಿಕಿತ್ಸಾ ಸೌಲಭ್ಯ ಇಲ್ಲದ ಗ್ರಾಮೀಣ ಭಾಗದಲ್ಲಿ ಕೊರೊನಾ ಹಬ್ಬಿದರೆ ನಿಯಂತ್ರಣ ದೊಡ್ಡ ಸವಾಲು ಆಗುತ್ತಿತ್ತು.

ಪ್ರಧಾನಿ ನರೇಂದ್ರ ಮೋದಿ ಸಹಿತ ಹಳ್ಳಿಗಳಿಗೆ ಕೊರೊನಾ ಹಬ್ಬದಂತೆ ನೋಡಿಕೊಳ್ಳಿ ಎಂದು ಪದೇಪದೆ ಹೇಳುತ್ತಿದ್ದರು. ಜಿಲ್ಲಾಧಿಕಾರಿಗಳ ಜತೆ ವೀಡಿಯೋ ಕಾನ್ಫರೆನ್ಸ್‌ ಮಾಡಿದಾಗಲೂ ಅದಕ್ಕೆ ಹೆಚ್ಚು ಒತ್ತು ನೀಡಿದರು. ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ಸಚಿವರೂ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರ ಜತೆ ಚರ್ಚಿಸಿ ನಿಯಂತ್ರಣ ಕ್ರಮಗಳ ಬಗ್ಗೆ ಸೂಚನೆ ನೀಡಿ ದ್ದರು. ಅದರಂತೆ ಎಲ್ಲ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಜತೆ ವೀಡಿಯೋ ಕಾನ್ಫರೆನ್ಸ್‌ ಸಹ ಮಾಡಲಾಗಿತ್ತು. ಅಂತಿಮವಾಗಿ ಕಂದಾಯ ಇಲಾಖೆ ಈ ಬಗ್ಗೆ ಸುತ್ತೋಲೆ ಹೊರಡಿಸಿತು.

ಅದಕ್ಕೂ ಮುಂಚೆಯೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿದ್ದ ಈ ಕಾರ್ಯಕ್ರಮ ಯಶಸ್ವಿಯೂ ಆಗಿತ್ತು. ಗ್ರಾಮಾಂತರ ಜಿಲ್ಲೆಗಳಲ್ಲಿ 15 ದಿನಗಳಲ್ಲಿ 2,569 ಗ್ರಾಮಗಳಿಗೆ ವೈದ್ಯರು ಭೇಟಿ ನೀಡಿ 1,09,128 ಜನರನ್ನು ತಪಾಸಣೆ ಮಾಡಿದ್ದು 2,031 ಕೊರೊನಾ ಪ್ರಕರಣ ಪತ್ತೆ ಮಾಡಲಾಗಿತ್ತು.

ಇದರ ಆಧಾರದಲ್ಲಿ ರಾಜ್ಯದ ಇತರ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಯಿತು. ಕಳೆದ ಹತ್ತು ದಿನಗಳಲ್ಲಿ ಹಳ್ಳಿಗಳತ್ತ ಹೊರಟ ವೈದ್ಯರು ಗ್ರಾಮೀಣ ಭಾಗದ ಜನರ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಮೂಲಕ ಕೊರೊನಾ ಹರಡುವಿಕೆ ತಪ್ಪಿಸಿ ಸೋಂಕಿತರಿಗೆ ಸಕಾಲದಲ್ಲಿ ಚಿಕಿತ್ಸೆ ದೊರಕುವಂತೆ ಮಾಡಿದ್ದರ ಪರಿಣಾಮ ಪ್ರಕರಣಗಳು ಇಳಿಮುಖವಾಗುತ್ತಿವೆ. ಇದು ಸಮಾಧಾನಕರ ಸಂಗತಿ.
ಹಳ್ಳಿಗಳತ್ತ ವೈದ್ಯರ ನಡಿಗೆ ಕಾರ್ಯಕ್ರಮದಿಂದ ಆದ ಮತ್ತೂಂದು ಉಪಯೋಗ ಎಂದರೆ ಕೊರೊನಾ ಅಷ್ಟೇ ಅಲ್ಲದೆ ಇತರ ಆರೋಗ್ಯ ಸಮಸ್ಯೆಗಳೂ ತಪಾಸಣೆ ಸಂದರ್ಭದಲ್ಲಿ ಪತ್ತೆಯಾಗಿ ಚಿಕಿತ್ಸೆ ದೊರಕು ವಂತಾಗಿದೆ. ಇದರ ನಡುವೆ ಪ್ರತೀ ಹಳ್ಳಿಯಲ್ಲಿಯೂ ಆರೋಗ್ಯ ಸಮೀಕ್ಷೆಯೂ ನಡೆಯುತ್ತಿದ್ದು ಒಟ್ಟಾರೆ ಹಳ್ಳಿಗಳ ಸಮಗ್ರ ಚಿತ್ರಣ ದೊರೆಯಲಿದೆ. ಇದರಿಂದ ಆರೋಗ್ಯ ಕಾರ್ಯಕ್ರಮಗಳನ್ನು ರೂಪಿಸಲು ಸಹಕಾರಿಯಾಗುತ್ತದೆ.

Advertisement

ಖಾಸ ಹಾಗೂ ಸರಕಾರಿ ವೈದ್ಯಕೀಯ ಕಾಲೇಜುಗಳ ಅಂತಿಮ ವರ್ಷದ ವೈದ್ಯ ವಿದ್ಯಾರ್ಥಿಗಳು, ಆರೋಗ್ಯ ಇಲಾಖೆಯ ವೈದ್ಯರು, ದಾದಿಯರು, ಗ್ರಾಮ ಮಟ್ಟದ ಕಾರ್ಯಪಡೆ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯತ್‌ ಸಿಬಂದಿ ಎಲ್ಲರೂ ಈ ಕಾರ್ಯದಲ್ಲಿ ಜತೆಗೂಡಿದ್ದಾರೆ. ಹೀಗಾಗಿ ಅವರೆಲ್ಲರೂ ಅಭಿನಂದನಾರ್ಹರು.

Advertisement

Udayavani is now on Telegram. Click here to join our channel and stay updated with the latest news.

Next