Advertisement

8 ತಿಂಗಳ ಮಗು ಕಾಪಾಡಿದ ವೈದ್ಯರು

10:43 PM Aug 11, 2020 | mahesh |

ಕೊಚ್ಚಿ: ಉಪಾಹಾರ ಸೇವನೆ ವೇಳೆ ಮಗುವಿನ ಶ್ವಾಸಕೋಶದೊಳಗೆ ಆಕಸ್ಮಿಕವಾಗಿ ಸೇರಿಕೊಂಡ ಆಹಾರದ ತುಣುಕನ್ನು ಕೇರಳ ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ವೈದ್ಯರ ಕೃಪೆಯಿಂದ 8 ತಿಂಗಳ ಹಸುಗೂಸು ಪ್ರಾಣಾಪಾಯದಿಂದ ಪಾರಾಗಿದೆ.

Advertisement

ಕೇಕ್‌ ಹಾಗೂ ರಸ್ಕಿನ ತುಣುಕುಗಳನ್ನು ಮಗುವಿಗೆ ಆಹಾರವಾಗಿ ನೀಡಲಾಗಿತ್ತು. ಹಠಾತ್ತನೆ ಕೆಮ್ಮು ಬಂದಿದ್ದರಿಂದ ರಸ್ಕಿನ ಕಣಗಳು ಅನ್ನನಾಳದ ಮೂಲಕ ಶ್ವಾಸಕೋಶವನ್ನು ಸೇರಿದೆ. ಉಸಿರಾಟ ಕಷ್ಟವಾದ ಕಾರಣ ಕೂಡಲೇ ಮಗುವನ್ನು ಕೊಚ್ಚಿನ್‌ನ ಅಮೃತ ಇನ್‌ಸ್ಟಿಟ್ಯೂಟ್‌ ಆಫ್ ಮೆಡಿಕಲ್‌ ಸೈನ್ಸಸ್‌ ಆಸ್ಪತ್ರೆಗೆ ದಾಖಲಿಸಿ, ಫಾರಿನ್‌ ಬಾಡಿಯನ್ನು ಪರೀಕ್ಷೆಗೊಳಪಡಿಸಲಾಯಿತು.

ಏನಿದು “ಫಾರಿನ್‌ ಬಾಡಿ’?: “ದೇಹಕ್ಕೆ ಮುಳ್ಳು ಚುಚ್ಚಿದಾಗ ಅಥವಾ ನಾಣ್ಯ ಇತ್ಯಾದಿ ವಸ್ತುಗಳು ಒಳ ಸೇರಿದಾಗ ಆ ದೇಹವನ್ನು ಫಾರಿನ್‌ ಬಾಡಿ ಎನ್ನುತ್ತೇವೆ. ಮಗುವಿನ ಫಾರಿನ್‌ ಬಾಡಿಯ ಒಳಗೆ ಬ್ರಾಂಕೋಸ್ಕೋಪಿಯನ್ನು ತೂರಿಸಿ, ಅದರಲ್ಲಿನ ಕ್ಯಾಮೆರಾದ ಮೂಲಕ ಶ್ವಾಸನಾಳದ ಸ್ಥಿತಿಗತಿಗಳನ್ನು ಪರಿಶೀಲಿಸಿ ಕೇವಲ 30 ನಿಮಿಷಗಳಲ್ಲಿ ರಸ್ಕಿನ ತುಣುಕುಗಳನ್ನು ಹೊರತೆಗೆದೆವು’ ಎಂದು ಆಸ್ಪತ್ರೆಯ ತಜ್ಞ ಡಾ. ಟಿಂಕು ಜೋಸೆಫ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next