Advertisement

ಆಪರೇಷನ್‌ ಕಮಲದಲ್ಲಿ ಸಿಲುಕಿದ ಡಾಕ್ಟರ್‌ ಜಾಧವ

05:53 AM Jan 17, 2019 | Team Udayavani |

ಚಿಂಚೋಳಿ: ವೃತ್ತಿಯಲ್ಲಿ ಶಸ್ತ್ರ ಚಿಕಿತ್ಸಾ ತಜ್ಞರಾಗಿರುವ ಡಾ| ಉಮೇಶ ಜಾಧವ ಈಗ ತಾವೇ ‘ಆಪರೇಷನ್‌ ಕಮಲ’ದಲ್ಲಿ ಸಿಲುಕಿದ್ದಾರೆ.

Advertisement

ಕಾಂಗ್ರೆಸ್‌ ಪಕ್ಷವೇ ತಮ್ಮ ಕುಟುಂಬ, ಕಾಂಗ್ರೆಸ್‌ ಪಕ್ಷದ ರಕ್ತವೇ ತಮ್ಮ ಮೈಯಲ್ಲಿ ಹರಿಯುತ್ತಿದೆ, ಈ ಪಕ್ಷವೇ ತಮ್ಮ ಜೀವ ಎನ್ನುತ್ತಿದ್ದ ಜಾಧವ ಕಮಲ ಪಾಳೆಯದತ್ತ ಹೆಜ್ಜೆ ಹಾಕಲು ಕಾರಣವೇನು ಎನ್ನುವ ಚರ್ಚೆ ರಾಜಕೀಯ ವಲಯದಲ್ಲಿ ಆರಂಭವಾಗಿದೆ. ಶಾಸಕರ ಅಳಿಯ ಅರುಣ ಪವಾರ, ಹಿರಿಯ ಸಹೋದರ ರಾಮಚಂದ್ರ ಜಾಧವ ಈ ತಂತ್ರದ ರೂವಾರಿ ಎನ್ನಲಾಗುತ್ತಿದೆ.

ಮೀಸಲು ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಎರಡನೇ ಬಾರಿ ಗೆಲುವು ಸಾಧಿಸಿದ ಡಾ| ಉಮೇಶ ಜಾಧವ ಈಗಾಗಲೇ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿ ಅಧಿಕಾರ ಅನುಭವಿಸಿದ್ದಾರೆ. ಅಲ್ಲದೇ ಈ ಬಾರಿ ಉಗ್ರಾಣ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಹೀಗಿದ್ದರೂ ಸಚಿವ ಸ್ಥಾನ ದೊರೆಯಲಿಲ್ಲ ಎನ್ನುವ ಕಾರಣಕ್ಕಾಗಿಯೇ ಮುನಿಸಿಕೊಂಡರೇ ಹೇಗೆ ಎನ್ನುವ ವಿಷಯ ಚರ್ಚೆಗೆ ಗ್ರಾಸವಾಗಿದೆ.

ಹೈದ್ರಾಬಾದ ಕರ್ನಾಟಕದ ಯಾವುದೇ ವಿಧಾನಸಭೆ ಮತಕ್ಷೇತ್ರಗಳಲ್ಲಿ ಬಿಜೆಪಿ ಅಲೆ ಅಷ್ಟೊಂದು ಇಲ್ಲ. ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈ ಭಾಗದಲ್ಲಿ ಯಾರೂ ಪ್ರಬಲ ಪ್ರತಿಸ್ಪರ್ಧಿಯಾಗುವ ನಿಟ್ಟಿನಲ್ಲಿ ಬೆಳೆದಿಲ್ಲ. ಹೀಗಿದ್ದಾಗೂ ಯಾಕೆ ಜಾಧವ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ ಎನ್ನುವ ಆತಂಕ ಅವರ ಬೆಂಬಲಿ ಗರದ್ದಾಗಿದೆ. ಕಲಬುರಗಿ ಲೋಕಸಭೆ ಮತಕ್ಷೇತ್ರಕ್ಕೆ ಡಾ| ಮಲ್ಲಿಕಾರ್ಜುನ ಖರ್ಗೆ ಸತತವಾಗಿ ಎರಡು ಬಾರಿ ಜಯ ಸಾಧಿಸಿ ಹಿಂದುಳಿದ ಭಾಗದ ಅಭಿವೃದ್ಧಿಗೆ ಸಾಕಷ್ಟು ಪರಿಶ್ರಮಿಸಿದ್ದಾರೆ.

ಶಾಮರಾವ ಚಿಂಚೋಳಿ

Advertisement
Advertisement

Udayavani is now on Telegram. Click here to join our channel and stay updated with the latest news.

Next