Advertisement

ಮನೆ ಮುಂದಿರುವ ಡಾಕ್ಟರ್‌!

04:27 AM Jun 09, 2020 | Lakshmi GovindaRaj |

ಮನೆ ಮುಂದೆ ಎಕ್ಕದ ಗಿಡ ಇದ್ದರೆ ಅದಕ್ಕೆ ಪೂಜೆ ಮಾಡುವುದುಂಟು. ಎಕ್ಕದ ಗಿಡವಿದ್ದರೆ, ಮನೆಮದ್ದಿಗೆ ಕೊರತೆಯೇ ಎಂಬ ಮಾತುಂಟು. ಬಿಳಿ ಎಕ್ಕದ ಗಿಡದ  ಬೇರನ್ನು ನಿಂಬೆಹಣ್ಣ ರಸದಲ್ಲಿ ಅರೆದು ಕುಡಿದರೆ ಜ್ವರ ಕಡಿಮೆಯಾಗುತ್ತದೆ.  ಕಫ‌ ಕಟ್ಟಿತು ಅಂತಿಟ್ಟುಕೊಳ್ಳಿ, ಆಗ ಎಕ್ಕದ ಬೇರಿನ ತೊಗಟೆಯನ್ನು ಪುಡಿ ಮಾಡಿ, ಜೇನು ತುಪ್ಪದ ಜೊತೆ ಸೇರಿಸಿ ಕುಡಿದರೆ ಗುಣವಾಗುತ್ತದೆ. ಮೂಲವ್ಯಾಧಿಯಿಂದ ನರಳುತ್ತಿರುವವರಿಗೆ ಎಕ್ಕ ರಾಮಬಾಣವೇ ಸರಿ. ಇದರ ಹಾಲನ್ನು,  ಅರಿಶಿನಕ್ಕೆ ಸೇರಿಸಿ ಲೇಪಿಸಿದರೆ ನೋವು ನಿವಾರಣೆಯಾಗುತ್ತದೆ.

Advertisement

ಕಮಲದ ಹೂವು ಕೂಡ ಹಲವು ರೀತಿಯಲ್ಲಿ ಉಪಯೋಗಿ. ಹುಳಕಡ್ಡಿ ಅಂತ ದೇಹದ ಯಾವುದೋ ಒಂದು ಭಾಗದಲ್ಲಿ ಕೆರೆತ ಶುರುವಾಗುತ್ತದೆ. ಅದಕ್ಕೆ ತಾವರೆ ಕಮಲದ  ಗಡ್ಡೆಯ ರಸವನ್ನು ಕುಡಿಸುತ್ತಾರೆ. ಕೆಮ್ಮು ನಿವಾರಣೆಗೆ, ತಾವರೆ ಬೇರಿನ ಚೂರ್ಣ ಬೆಸ್ಟ್‌  ಮುಖದ ಕಾಂತಿ ಹೆಚ್ಚಿಸಲು, ಕೆಂದಾವರೆ ದಳಗಳನ್ನು ಬಿಸಿಲಿಗೆ ಹಾಕಿ, ಪುಡಿ ಮಾಡಿ ಹಾಲಿನೊಂದಿಗೆ ಬೆರೆಸಿ ಮುಖಕ್ಕೆ ಲೇಪಿಸಿಕೊಳ್ಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next