Advertisement

ಪೊಲೀಸರಿಗೆ ಭವಿಷ್ಯ ಗೊತ್ತಾ?

10:26 PM Jul 01, 2019 | Team Udayavani |

ಸುಳ್ಳು ಹೇಳಿದರೆ, ಸತ್ಯದ ತಲೆಯ ಮೇಲೆ ಹೊಡೆದ ಹಾಗಿರಬೇಕು ಅಂತಾರೆ. ಅಂದರೆ, ಎಲ್ಲರೂ ನಂಬುವಂಥ ಸುಳ್ಳು ಹೇಳಬೇಕು. ಹಸಿಹಸಿ ಸುಳ್ಳು ಹೇಳಿದರೆ ಅಪಾಯ ತಪ್ಪಿದ್ದಲ್ಲ. ಆದ್ರೆ ಇಲ್ಲೊಬ್ಬ ಭೂಪ, ಸತ್ಯ ಕಣ್ಣೆದುರೇ ಇದ್ದರೂ, ಸುಳ್ಳು ಹೇಳಲು ಹೋಗಿ ಸಿಕ್ಕಿ ಬಿದ್ದಿದ್ದಾನೆ. ಅದೂ, ಯಾರ ಬಳಿ ಅಂತೀರ? ಪೊಲೀಸರ ಬಳಿ! ಕಳ್ಳಕಾಕರನ್ನು ಏರೋಪ್ಲೇನ್‌ ಹತ್ತಿಸಿ ಬಾಯಿ ಬಿಡಿಸುವಲ್ಲಿ ಪೊಲೀಸರು ನಿಪುಣರು. ಅಂಥವರ ಬಳಿ ಸುಳ್ಳು ನಿಲ್ಲುತ್ತದೆಯೇ?

Advertisement

ಮಾರ್ಕೆಲ್‌ ಟೌನರ್‌ ಎಂಬಾತನ ವಿರುದ್ಧ ಹಲ್ಲೆ ಪ್ರಕರಣ ದಾಖಲಾಗಿತ್ತು. ಪೊಲೀಸರು ಅವನಿಗಾಗಿ ಹುಡುಕಾಟ ನಡೆಸಿದ್ದರು. ತಲೆಮರೆಸಿಕೊಂಡಿದ್ದ ಮಾರ್ಕೆಲ್‌, ಒಂದು ದಿನ ಪೊಲೀಸರ ಕಣ್ಣಿಗೆ ಬಿದ್ದ. ಪೊಲೀಸರಿಗೆ ಇದು ಮಾರ್ಕೆಲ್ಲನೇ ಅಲ್ಲವೇ ಎಂಬ ಅನುಮಾನ. ಚಹರೆ ಮತ್ತು ವೇಷಭೂಷಣಗಳಿಂದಾಗಿ ಬೇರೆ ರೀತಿ ಕಾಣುತ್ತಿದ್ದುದರಿಂದ ಪೊಲೀಸರಿಗೆ ಸ್ಥಳದಲ್ಲಿ ಅವನ ಗುರುತು ಪತ್ತೆ ಹಚ್ಚಲು ಕಷ್ಟವಾಗಿತ್ತು. ಆದಾಗ್ಯೂ “ನಿನ್ನ ಹೆಸರೇನಪ್ಪಾ?’ ಅಂತ ಕೇಳಿದರು. ಅವನು ತನ್ನನ್ನು ತಾನು “ಆ್ಯಡಂ’ ಎಂದು ಪರಿಚಯಿಸಿಕೊಂಡ. ಅಷ್ಟಕ್ಕೇ ಪೊಲೀಸರಿಗೆ ಈತ ತಾವು ಹುಡುಕುತ್ತಿದ್ದ ಮಾರ್ಕೆಲ್‌ ಎಂಬುದು ಗೊತ್ತಾಗಿಬಿಟ್ಟಿತು. ಮರುಪ್ರಶ್ನೆ ಮಾಡದೆ ಸೀದಾ ಎತ್ತಾಕಿಕೊಂಡು ಹೋದರು. ಲಾಕಪ್ಪಿನೊಳಗೆ ದಬ್ಬಿದ ಮೇಲೆ ಮಾರ್ಕೆಲ್‌ ಅಂಗಲಾಚಿದ “ನಾನೇ ಮಾರ್ಕೆಲ್‌ ಅಂತ ನಿಮಗೆ ಹ್ಯಾಗೆ ಗೊತ್ತಾಯ್ತು ಅಂತ ಹೇಳಿ ಪುಣ್ಯ ಕಟ್ಕೊಳ್ಳಿ’ ಎಂದು. ಹತ್ತಿರ ಬಂದ ಪೊಲೀಸಪ್ಪ “ಅಪ್ಪಾ… ನಿನ್ನ ಜೇಬಿನ ಮೇಲೆ ಪಿನ್ನು ಹಾಕಿ ಚುಚ್ಚಿರುವ ಬ್ಯಾಡ್ಜ್ ನೋಡಪ್ಪಾ’ ಅಂದರು. ಅದರಲ್ಲಿ ಅವನ ಹೆಸರು “ಮಾರ್ಕೆಲ್‌ ಟೌನರ್‌’ ಎಂದು ಸ್ಪುಟವಾಗಿ ಬರೆದಿತ್ತು!

Advertisement

Udayavani is now on Telegram. Click here to join our channel and stay updated with the latest news.

Next