Advertisement

ಆಶಯವನ್ನು ದುರ್ಬಲಗೊಳಿಸದಿರಿ

01:30 AM Apr 15, 2019 | Team Udayavani |

ಹೊಸದಿಲ್ಲಿ: ಯಾರು ದೇಶದಲ್ಲಿ ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಭಾÅತೃತ್ವವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದ್ದಾರೋ, ಅವರು ಡಾ. ಬಿ.ಆರ್‌.ಅಂಬೇಡ್ಕರ್‌ರಿಗೆ ಅಗೌರವ ತೋರುತ್ತಿದ್ದಾರೆ ಎಂದರ್ಥ. ಹೀಗೆಂದು ಹೇಳಿರುವುದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ.

Advertisement

ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರ ಜಯಂತಿ ಹಿನ್ನೆಲೆಯಲ್ಲಿ ರವಿವಾರ ಟ್ವೀಟ್‌ ಮಾಡಿದ ರಾಹುಲ್‌, “ಬಾಬಾ ಸಾಹೇಬರ ಜಯಂತಿಯ ದಿನ, ನಾವು ಮತ್ತೆ ಸಂವಿಧಾನದ 4 ಸಾರ್ವತ್ರಿಕ ಮೌಲ್ಯಗಳಾದ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಸೌಹಾರ್ದತೆಗೆ ಬದ್ಧರಾಗಿರೋಣ. ಯಾರು ಒಂದೆಡೆ ಅವರ ಈ ಮೌಲ್ಯಗಳನ್ನು ದುರ್ಬಲಗೊಳಿಸುತ್ತಲೇ, ಮತ್ತೂಂದೆಡೆ ಅವರನ್ನು ಸ್ಮರಿಸುತ್ತಿದ್ದಾರೋ, ಅಂಥವರು ಬಾಬಾ ಸಾಹೇಬ್‌ಗ ಅಗೌರವ ತೋರುತ್ತಿದ್ದಾರೆ ಎಂದೇ ಅರ್ಥ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next