Advertisement

ಮನೆ ಅಂದ್ಮೇಲೆ ಹಾಳು ಮಾಡೋರು ಇರೋರೆ !

06:20 AM Mar 25, 2018 | |

ಬಾಗಲಕೋಟೆ: ಒಂದು ಮನೆ ಅಂದ್ಮೇಲೆ ಹಾಳು ಮಾಡೋರು ಇರ್ತಾರೆ. ಉದ್ಧಾರ ಮಾಡೋರು ಇರ್ತಾರೆ. ಎಲ್ಲರೂ ಒಟ್ಟಿಗೆ ಹೋಗಬೇಕು. ವೀರಶೈವ ಮಹಾಸಭೆ ಕೈಗೊಂಡ ನಿರ್ಣಯ ಸೂಕ್ತವಾಗಿದೆ ಎಂದು ತೋಟಗಾರಿಕೆ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಹೇಳಿದರು. 

Advertisement

ತೋಟಗಾರಿಕೆ ವಿವಿಯ 7ನೇ ಘಟಿಕೋತ್ಸವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯರು ಅನಿಸಿಕೊಂಡೋರು, ಮನೆತನ ಮುನ್ನಡೆಸಿಕೊಂಡು ಹೋಗಬೇಕು. ಸಚಿವ ಪಾಟೀಲರು ವೀರಶೈವ ಮಹಾಸಭಾ ನಮಗೆ ಸಂಬಂಧವಿಲ್ಲ ಎಂದು ಹೇಳಿರುವುದು ಅವರಿಚ್ಚೆ. ಯಾರು ಮನೆ ಹಾಳು ಮಾಡ್ತಾರೆ ಅನ್ನೋದನ್ನು ಕಾದು ನೋಡೋಣ. ವೀರಶೈವ ಮಹಾಸಭೆ, ಸಚಿವ ಈಶ್ವರ ಖಂಡ್ರೆ ಹಾಗೂ ಎಲ್ಲ ಮಠಾಧೀಶರು ಸೇರಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next