Advertisement

ಖಲಿಸ್ಥಾನಿಗಳನ್ನು ಕಳಿಸಬೇಡಿ

01:15 AM Mar 14, 2019 | Team Udayavani |

ಹೊಸದಿಲ್ಲಿ: ಖಲಿಸ್ಥಾನ್‌ ಪ್ರತ್ಯೇಕತಾವಾದಿಗಳನ್ನು ಕರ್ತಾರ್ಪುರದ ಗುರುದ್ವಾರಕ್ಕೆ ಕಳುಹಿಸದಂತೆ ಪಾಕಿಸ್ಥಾನಕ್ಕೆ ಭಾರತ ಸೂಚಿಸಲಿದೆ. 

Advertisement

ಗುರುವಾರ ನಡೆಯಲಿರುವ ಉಭಯ ದೇಶಗಳ ಅಧಿಕಾರಿಗಳ ಸಭೆಯಲ್ಲಿ ಈ ವಿಚಾರವನ್ನು ಭಾರತ ಪ್ರಸ್ತಾವಿಸಲಿದೆ. ಅಟ್ಟಾರಿ ವಾಘಾ ಗಡಿಯಲ್ಲಿ ಭಾರತದ ಕಡೆ ಈ ಸಭೆ ನಡೆಯಲಿದೆ. ಈ ಹಿಂದೆ ಕರ್ತಾರ್ಪುರಕ್ಕೆ ಭಾರತದ ಹೈಕಮಿಷನರ್‌ಗೆ ತೆರಳಲು ಅವಕಾಶ ಮಾಡಿಕೊಟ್ಟಿರಲಿಲ್ಲ. ಅಷ್ಟೇ ಅಲ್ಲ, ಭಾರತದ ಸಿಕ್ಖರಿಗೂ ಅಲ್ಲಿಗೆ ತೆರಳಲು ಅನುವು ಮಾಡಿರಲಿಲ್ಲ. ಈ ಹಿಂದೆ ಖಲಿಸ್ಥಾನ ಪ್ರತ್ಯೇಕತೆಯ ಪರ ಹೋರಾಟ ನಡೆಸುತ್ತಿರುವವರನ್ನು ಅಲ್ಲಿಗೆ ಆಹ್ವಾನಿಸಿದ್ದು ಭಾರತದ ಆಕ್ಷೇಪಕ್ಕೆ ಕಾರಣವಾಗಿತ್ತು.
 

Advertisement

Udayavani is now on Telegram. Click here to join our channel and stay updated with the latest news.

Next