Advertisement

ಹಣಕ್ಕಾಗಿ ಮತದಾರರನ್ನೇ ಮಾರಾಟ ಮಾಡ್ತೀರಾ: ಜಾಧವ್ ಮನೆಗೆ ಮುತ್ತಿಗೆ

12:50 PM Jan 16, 2019 | Team Udayavani |

ಕಲಬುರಗಿ: ಹಣಕ್ಕಾಗಿ ಮತದಾರರನ್ನೇ ಮಾರಾಟ ಮಾಡಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಚಿಂಚೋಳಿ ಕಾಂಗ್ರೆಸ್ ಶಾಸಕ ಡಾ.ಉಮೇಶ್ ಜಾಧವ್ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಘಟನೆ ನಡೆಯಿತು.

Advertisement

ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಆಪರೇಷನ್ ಕಮಲದ ಹಗ್ಗಾಜಗ್ಗಾಟ ಮುಂದುವರಿದ ನಡುವೆ ಆಪರೇಷನ್ ಕಮಲಕ್ಕೆ ಒಳಗಾಗಿದ್ದಾರೆನ್ನಲಾದ ಕೆಲ ಶಾಸಕರನ್ನು ವಾಪಸ್ ಕರೆ ತರಲಾಗಿತ್ತು. ಈ ಸಂದರ್ಭದಲ್ಲಿ ಶಾಸಕ ಜಾಧವ್ ಅವರು ಕೂಡಾ ಹಣದಾಸೆಗೆ ಬಿಜೆಪಿ ಜತೆ ಕೈಜೋಡಿಸಿರುವುದಾಗಿ ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿ ಕುದುರೆಯನ್ನು ತಂದು ವಿನೂತನವಾಗಿ ಪ್ರತಿಭಟಿಸಿದ್ದರು.

ಮತದಾರರು ಕೊಟ್ಟ ಗೌರವವನ್ನು ಕಳೆದುಕೊಂಡಿದ್ದೀರಿ. ಮತದಾರರನ್ನೇ ಹಣಕ್ಕಾಗಿ ಮಾರಾಟ ಮಾಡುವ ಪಕ್ಷ ದ್ರೋಹಿ ಶಾಸಕರಿಗೆ ದಿಕ್ಕಾರ ಎಂದು ಘೋಷಣೆ ಕೂಗಿದರು.

Advertisement

Udayavani is now on Telegram. Click here to join our channel and stay updated with the latest news.

Next