Advertisement

ಬಿಎಸ್‌ವೈ ಸರ್ಕಾರ ಮುಂದುವರಿಕೆ ಅನುಮಾನ ಬೇಡ: ಮತ್ತಿಮೂಡ

10:51 AM May 19, 2018 | Team Udayavani |

 ಶಹಾಬಾದ: ಕಲಬುರಗಿ ಗ್ರಾಮೀಣ ಮತಕ್ಷೇತ್ರದ ನೂತನ ಶಾಸಕ ಬಸವರಾಜ ಮತ್ತಿಮೂಡ ಶುಕ್ರವಾರ ಬೆಳಗ್ಗೆ ಬೆಂಗಳೂರಿನ ಮೂಲಕ ಕಲಬುರಗಿಗೆ ಬರುವ ವೇಳೆ ಶಹಾಬಾದ ನಿಲ್ದಾಣದಲ್ಲಿ ಅವರನ್ನು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ನಾಗಣ್ಣ ರಾಂಪೂರೆ ಹಾಗೂ ಅಶೋಕ ಜಿಂಗಾಡೆ ನೇತೃತ್ವದಲ್ಲಿ ಸನ್ಮಾನಿಸಲಾಯಿತು.

Advertisement

ನಂತರ ಮಾತನಾಡಿದ ಬಸವರಾಜ ಮತ್ತಿಮೂಡ, ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇನ್ನೇನು ಶನಿವಾರ ಬಹುಮತವನ್ನು ನಾವು ಸಾಬೀತು ಪಡಿಸುತ್ತೇವೆ. ನಮ್ಮದೇ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು. 

ಕಾಂಗ್ರೆಸ್‌ ಹಾಗೂ ಜನತಾದಳದ ದುರಾಡಳಿತವನ್ನು ರಾಜ್ಯದ ಜನರು ನೋಡಿದ್ದಾರೆ. ಈಗಾಗಲೇ ಕಾಂಗ್ರೆಸ್‌ ದುರಾಡಳಿತಕ್ಕೆ ಬೇಸತ್ತು ಜನತೆ ಬಿಜೆಪಿಗೆ ಹೆಚ್ಚಿನ ಸ್ಥಾನ ನೀಡಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ,ಯಾವುದೇ ಅನುಮಾನ ಬೇಡ ಎಂದರು.

ಬಿಜೆಪಿ ಮುಖಂಡ ಕನಕಪ್ಪ ದಂಡಗುಲಕರ್‌, ವಿರೇಶ ಬಂದೆಳ್ಳಿ, ತಿಪ್ಪಣ್ಣ ನಾಟೇಕಾರ, ವಿಶ್ವರಾದ್ಯಸ್ವಾಮಿ, ಸುರೇಶ ಹಳ್ಳಿ, ಶ್ರೀಧರ್‌ ಜೋಷಿ,ಚೇತನ ವಳಸಂಗ,ಶರಣು ಕೌಲಗಿ, ಸುನೀಲ ಮೆಂಗನ್‌, ದತ್ತಾತ್ರೇಯ ಘಂಟಿ, ಶರಣು ವಸ್ತ್ರದ್‌, ಮಹಾದೇವ ಗೊಬ್ಬೂರಕರ್‌, ಬಸವರಾಜ ಪಾಟೀಲ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next