Advertisement
ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ಭಾನುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಶಂಕರ ಕಣ್ಣಿನ ಆಸ್ಪತ್ರೆ, ಇನ್ನರ್ವೀಲ್ ಕ್ಲಬ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಲೋಕ್ ಅದಾಲತ್, ಮಧ್ಯಸ್ಥಿಕೆ, ಸಂಧಾನ, ನೊಂದವರಿಗೆ ಪರಿಹಾರ ಯೋಜನೆಗಳ ಹಾಗೂ ಆರೋಗ್ಯ, ಕಾನೂನು ಅರಿವು ಮತ್ತು ಕಣ್ಣಿನ ವಿಶೇಷ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಬಾಧ್ಯತೆಗಳನ್ನು ಅರ್ಥೈಸಿಕೊಂಡಿಲ್ಲ ಎಂಬ ಕಾರಣಕ್ಕೆ ಇಲ್ಲಿ ನಿಮ್ಮನ್ನು ಕೂಡಿ ಹಾಕಿದ್ದಾರೆ. ತಿದ್ದಿಕೊಳ್ಳಲು ವಿಚಾರಣಾಧೀನ ಕೈದಿಗಳಿಗೆ ಕಾನೂನು ಸಂಧಾನ, ಮಧ್ಯಸ್ಥಿಕೆಯಂತಹ ಅವಕಾಶವನ್ನು ನೀಡಿದೆ. ಅವಶ್ಯವಿದ್ದಲ್ಲಿ ಖರ್ಚು ರಹಿತವಾಗಿ ಬಗೆಹರಿಸಿಕೊಳ್ಳಲು ಲೋಕ್ ಅದಾಲತ್ ನೆರವು ಪಡೆಯಬಹುದು ಎಂದರು.
ನಡೆಸಲು ಸಾಧ್ಯವಾಗದಿದ್ದಲ್ಲಿ ನ್ಯಾಯಾಲಯದ ವತಿಯಿಂದಲೇ ವಕೀಲರನ್ನು ನೇಮಿಸುವ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಅಂತೆಯೇ ಕೈದಿಗಳ ಆರೋಗ್ಯ ಪರಿಶೀಲನೆಗೆ ಓರ್ವ ವೈದ್ಯಾಧಿಕಾರಿಗಳನ್ನು ನೇಮಕ ಮಾಡಿ ಉಚಿತ ಔಷಧೋಪಚಾರ ವ್ಯವಸ್ಥೆ ಮಾಡಲಾಗಿದೆ. ಕೈದಿಗಳು ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಲ್ಲಿ ವಿಚಾರಣೆ ಸ್ಥಗಿತಗೊಳಿಸಿ ನಂತರ ಮತ್ತೆ ವಿಚಾರಣೆ ನಡೆಸುವ ಅವಕಾಶವು ಇದೆ. ಈ ಎಲ್ಲಾ ಅನುಕೂಲತೆಗಳು ಕೈದಿಗಳ ಮನಃಪರಿವರ್ತನೆ ದೃಷ್ಟಿಯಿಂದ ಕಲ್ಪಿಸಲಾಗುತ್ತಿದೆ. ಆದರೆ ಮಾಡಿದ ತಪ್ಪು ತಿದ್ದಿಕೊಳ್ಳದೆ ಸೌಲತ್ತುಗಳನ್ನು ದುರುಪಯೋಗಪಡಿಸಿಕೊಂಡು ಲೈಲಿನಲ್ಲೇ ಉಳಿಯಲು ಬಯಸುವುದು ಸರಿಯಲ್ಲ ಎಂದು ಕಿವಿಮಾತು ಹೇಳಿದರು. ಯಾವುದೋ ಸಂದರ್ಭದಲ್ಲಿ ಅಪರಾಧ ಪ್ರಕರಣಗಳಿಗೆ ಬಲಿಯಾಗಿದ್ದೀರಿ. ಆದರೆ ತಿದ್ದಿಕೊಂಡು ನಡೆಯಲು ಸಾಕಷ್ಟು ಅವಕಾಶಗಳಿವೆ ಎಂದು ಹೇಳಿದರು.
Related Articles
Advertisement