Advertisement

ಜೀವ ಬೆದರಿಕೆಗೆ ಹೆದರಲಾರೆ: ಮಿಥುನ್‌ ರೈ

02:33 AM May 28, 2019 | Team Udayavani |

ಮಂಗಳೂರು: ಬೆದರಿಕೆಗೆ ಹೆದರುವುದಿಲ್ಲ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ ಅವರು ತನಗೆ ಜೀವ ಬೆದರಿಕೆ ಹಾಕಿದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

Advertisement

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಸೋಮವಾರ ಮಾಧ್ಯಮದ ಜತೆ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದದಿನದಿಂದಲೇ ಜಿಲ್ಲೆಯಲ್ಲಿ ಮತೀಯವಾದಿಗಳು ಅಟ್ಟಹಾಸ ಆರಂಭಿಸಿದ್ದಾರೆ. ಇದು ಅಲ್ಪಸಂಖ್ಯಾಕರು ಇರಬಹುದು ಅಥವಾ ಬಹುಸಂಖ್ಯಾಕರೇ ಇರಬಹುದು. ಅಂತಹ ಯಾವುದೇ ಶಕ್ತಿಗಳು ಜಿಲ್ಲೆಯ ಶಾಂತಿ, ಸಾಮರಸ್ಯಕ್ಕೆ ಧಕ್ಕೆ ತಂದಾಗ ಯುವ ಕಾಂಗ್ರೆಸ್‌ ಧ್ವನಿಎತ್ತಿದೆ; ಮುಂಬರುವ ದಿನಗಳಲ್ಲಿಯೂ ಧ್ವನಿ ಎತ್ತ್ತಲಿದೆ ಎಂದಿದ್ದಾರೆ.

ಜಿಲ್ಲೆಯ ಏಕತೆ, ಸಾಮರಸ್ಯಕ್ಕಾಗಿ ನಾನು ಬಲಿದಾನಕ್ಕೆ ಸಿದ್ಧ. ಅದರಿಂದ ಜಿಲ್ಲೆಯಲ್ಲಿ ಸಾಮರಸ್ಯ ಮಗದೊಮ್ಮೆ ಮೂಡಿ ಬರುವುದಿದ್ದರೆ ನಾನು ತಯಾರಾಗಿದ್ದೇನೆ ಎಂದು ವಿವರಿಸಿದರು. ಕೆಲವು ಜನ ಪುಂಡುಪೋಕರಿಗಳು ಜೀವಬೆದರಿಕೆ ಹಾಕಿದ್ದಾರೆ. ಭಗವಂತ ನನಗೆ ಆಯುಷ್ಯ ಕೊಟ್ಟಲ್ಲಿವರೆಗೆ ನಾನುಬದುಕಿರುತ್ತೇನೆ. ನನ್ನ ಹುಟ್ಟು, ಸಾವು ಭಗವಂತ ನಿರ್ಧರಿಸಿದ್ದಾನೆ ಎಂದು ಹೇಳಿದರು.

ಗೆದ್ದರೆ ಬಜರಂಗದಳವನ್ನು ನಿಷೇಧಿಸುತ್ತೇನೆ ಎಂಬ ಹೇಳಿಕೆಗೆ ಈ ಜೀವ ಬೆದರಿಕೆ ಹಾಕಿರುವ ಸಾಧ್ಯತೆ ಇಲ್ಲ. ನನ್ನ ನೈಜ ಹಿಂದುತ್ವವನ್ನು ಸಹಿಸದ ಮಂದಿ ಬೆದರಿಕೆ ಹಾಕಿರಬಹುದು. ನನಗೆ ಈಗಾಗಲೇ ಪೊಲೀಸ್‌ ಭದ್ರತೆ ಇದೆ. ಬೆದರಿಕೆ ಹಾಕಿರುವವರಿಗೆ ಕದ್ರಿ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್‌ ಕಚೇರಿಯ ವಿಳಾಸ ನೀಡುತ್ತೇನೆ. ಇಡೀ ದಿನ ನಾನು ಅಲ್ಲಿರುತ್ತೇನೆ. ನಾನು 365 ದಿನವೂ ಮಂಗಳೂರಿನಲ್ಲಿಯೇ ಇರುತ್ತೇನೆ ಎಂದು ಮಿಥುನ್‌ ರೈ ಪ್ರತಿಕ್ರಿಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next