Advertisement

ಜೈಲು ಹಕ್ಕಿ ಬಿಎಸ್‌ವೈ ಸಿಎಂ ಮಾಡಬೇಡಿ: ಸಿದ್ದರಾಮಯ್ಯ

06:45 AM Apr 30, 2018 | |

ಇಂಡಿ (ವಿಜಯಪುರ): ಜೈಲಿಗೆ ಹೋಗಿ ಬಂದವರನ್ನು ಮುಖ್ಯಮಂತ್ರಿ ಮಾಡ್ತೀರಾ? ಹಾಗೆ ಮಾಡಬೇಡಿ, ರಾಜ್ಯ ಅಭಿವೃದ್ಧಿ ಆಗಬೇಕಾದರೆ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿ, ಆಶೀರ್ವದಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

Advertisement

ವಿಜಯಪುರ ಜಿಲ್ಲೆ ಇಂಡಿಯಲ್ಲಿ ನಡೆದ ಕಾಂಗ್ರೆಸ್‌ ಪಕ್ಷದ ಬಹಿರಂಗ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಮೋದಿಯವರು ಅಚ್ಛೇ ದಿನ್‌ ಆಯೇಗಾ ಎಂದು ಹೇಳಿದ್ದಾರೆ. ಅಚ್ಛೇ ದಿನ್‌ ಬಂದಿದೆಯಾ? ಕಚ್ಚಾ ಬೆಲೆ ಇಳಿಕೆಯಾದರೂ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಇಳಿಕೆಯಾಗಿಲ್ಲ. ನೋಟ್‌ ಬ್ಯಾನ್‌ ಮಾಡಿದ ನಂತರ ಕಪ್ಪು ಹಣ ತಂದು ಪ್ರತಿಯೊಬ್ಬರ ಅಕೌಂಟ್‌ಗೆ 15 ಲಕ್ಷ ಹಣ ಹಾಕ್ತೀನಿ ಅಂದಿದ್ರು, ಹಾಕಿದ್ರಾ? ಯಾರಿಗಾದರೂ ಹಣ ಬಂದಿದೆಯಾ? ಒಂದು ಕಡೆ ಕೋಮುವಾದಿ ಬಿಜೆಪಿ. ಇನ್ನೊಂದು ಕಡೆ ಅವಕಾಶವಾದಿ ಪಕ್ಷವಿದೆ. ನಮ್ಮದು ಅಭಿವೃದ್ಧಿ ಪರ ಪಕ್ಷ. ಸೂರ್ಯ ಪೂರ್ವದಲ್ಲಿ ಹುಟ್ಟೋದು ಎಷ್ಟು ಸತ್ಯವೋ ಕಾಂಗ್ರೆಸ್‌ ಮತ್ತೆ ಅ ಧಿಕಾರಕ್ಕೆ ಬರೋದು ಅಷ್ಟೇ ಸತ್ಯ ಎಂದರು.

ಬಿಎಸ್‌ವೈ ಮಾತು ನಂಬಬೇಡಿ:
ಬಳಿಕ ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರದಲ್ಲಿ ಮಾತನಾಡಿ, ಐದು ವರ್ಷಗಳಲ್ಲಿ ಮೂರು ಸಿಎಂಗಳು ಅಧಿ ಕಾರ ನಡೆಸಿದ ಬಿಜೆಪಿ ಸಾಧನೆ ಶೂನ್ಯ. ರೈತರ ಸಾಲಮನ್ನಾ ಮಾಡಲು ನಮ್ಮ ಸರ್ಕಾರದಲ್ಲಿ ನೋಟ್‌ಪ್ರಿಂಟ್‌ ಮಷಿನ್‌ ಇಲ್ಲ ಎಂದು ಹೇಳಿದ್ದು ಯಡಿಯೂರಪ್ಪ. ಹಸಿರು ಶಾಲು ಹಾಕಿಕೊಂಡು ಬರುವ ಬಿಎಸ್‌ವೈ ಮಾತು ನಂಬಬೇಡಿ. ಬಿಜೆಪಿಯ ಯಡಿಯೂರಪ್ಪ, ಜೆಡಿಎಸ್‌ನ ಕುಮಾರಸ್ವಾಮಿ ಅವರಪ್ಪನಾಣೆಗೂ ಸಿಎಂ ಆಗಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next