Advertisement

ದಾಳಿಕೋರ ಕಾಸರಗೋಡು ನಿವಾಸಿ! DNA ಪರೀಕ್ಷೆಯಲ್ಲಿ ದೃಢವಾಯ್ತು ಗುರುದ್ವಾರ ದಾಳಿಕೋರನ ಗುರುತು

12:32 AM Aug 16, 2020 | mahesh |

ಹೊಸದಿಲ್ಲಿ: ಮಾರ್ಚ್‌ 15ರಂದು ಅಫ್ಘಾನಿಸ್ಥಾನದ ಕಾಬೂಲ್‌ನ ಗುರುದ್ವಾರದಲ್ಲಿ ನಡೆದ ಆತ್ಮಾಹುತಿ ದಾಳಿಯ ದಾಳಿಕೋರ ಕೇರಳ ನಿವಾಸಿ ಮುಹಮ್ಮದ್‌ ಮುಹ್ಸಿನ್‌ ಎಂಬುದು ದೃಢಪ­ಟ್ಟಿದೆ. ಹೊಸದಿಲ್ಲಿಯ ಕೇಂದ್ರ ವಿಧಿ­ವಿಜ್ಞಾನ ಪ್ರಯೋಗಾಲಯ ನಡೆಸಿದ ಆತನ ಡಿಎನ್‌ಎ ಪರೀಕ್ಷೆಯಲ್ಲಿ ಈ ಅಂಶ ದೃಢವಾಗಿ ರುವುದಾಗಿ ಮೂಲಗಳು ಹೇಳಿವೆ. ಪರೀಕ್ಷೆಯ ವರದಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ)ಗೆ ಹಸ್ತಾಂತರಿಸಿರುವುದಾಗಿಯೂ ಮೂಲಗಳು ಮಾಹಿತಿ ನೀಡಿವೆ.

Advertisement

ಆಫ್ಘನ್‌ ದಾಳಿಯಲ್ಲಿ ಕೇರಳ ಮೂಲದ ಉಗ್ರರ ಕೈವಾಡ­ವಿರುವ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಮುಹ್ಸಿನ್‌ನ ತಾಯಿ ಮೈಮುನಾ ಅಬ್ದುಲ್ಲಾ ಅವರ ರಕ್ತದ ಮಾದರಿ ಸಂಗ್ರಹಿಸಲಾಗಿತ್ತು. ನಂತರ ಆಫ್ಘನ್‌ ಅಧಿಕಾರಿ­ಗಳಿಂದ ಆತ್ಮಾಹುತಿ ದಾಳಿಕೋ­ರರ ರಕ್ತದ ಮಾದರಿಗಳನ್ನು ತರಿಸಿ, ಪರೀಕ್ಷೆ ಮಾಡ ಲಾಗಿತ್ತು. ಡಿಎನ್‌ಎ ಪರೀಕ್ಷೆಯಲ್ಲಿ ಮೈಮುನಾ ಪುತ್ರನೇ ದಾಳಿಕೋರ ಎಂಬುದು ದೃಢಪಟ್ಟಿದೆ.

ಕಾಸರಗೋಡಿನ ಸಮೀಪದ ಗ್ರಾಮವೊಂದರಲ್ಲಿ 1991ರಲ್ಲಿ ಜನಿಸಿದ ಮುಹ್ಸಿನ್‌ ಇತ್ತೀಚೆಗೆ ಆಫ್ಘನ್‌ನಲ್ಲಿನ ಭಾರತೀಯ ಉಗ್ರರ ಗುಂಪಿನೊಂದಿಗೆ ಕೈಜೋಡಿಸಿದ್ದ. 27 ಮಂದಿಯನ್ನು ಬಲಿ ಪಡೆದ ಗುರುದ್ವಾರ ದಾಳಿಯ ಬಳಿಕ, ಐಸಿಸ್‌ ಉಗ್ರ ಸಂಘಟನೆಯು ದಾಳಿಕೋರರ ಫೋಟೋಗಳನ್ನು ಬಿಡುಗಡೆ ಮಾಡಿತ್ತು. ಆಗ ಮುಹ್ಸಿನ್‌ನ ಗುರುತು ಪತ್ತೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next