Advertisement

 ಪಳನಿಸ್ವಾಮಿ ವಿರುದ್ಧದ ನಿಂದನಾತ್ಮಕ ಹೇಳಿಕೆಗೆ ಎ. ರಾಜಾ ಕ್ಷಮೆ ..!

01:10 PM Mar 29, 2021 | Team Udayavani |

ತಮಿಳು ನಾಡು : ತಮಿಳು ನಾಡು ರಾಜ್ಯ ರಾಜಕಾರಣದಲ್ಲಿ ದೊಡ್ಡ ಚರ್ಚೆಗೆ ಕಾರಣವಾದ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಹಾಗೂ ಅವರ ತಾಯಿ ವಿರುದ್ಧ ನೀಡಿದ್ದ ನಿಂದನಾತ್ಮಕ ಹೇಳಿಕೆಗೆ  ಡಿ ಎಮ್  ಕೆ ನಾಯಕ ಎ ರಾಜಾ ಕ್ಷಮೆಯಾಚಿಸಿದ್ದಾರೆ.

Advertisement

ನನ್ನ ಮಾತುಗಳು ಇಬ್ಬರು ನಾಯಕರ ವೈಯಕ್ತಿಕ ಟೀಕೆ ಅಲ್ಲ. ನನ್ನ ಮಾತುಗಳು, ಸಾರ್ವಜನಿಕ ಜೀವನದಲ್ಲಿ ಇಬ್ಬರ ವ್ಯಕ್ತಿತ್ವಗಳ ಹೋಲಿಕೆಯಾಗಿದೆ ಎಂದು ಡಿ ಎಮ್ ಕೆ ನಾಯಕ  ಎ ರಾಜಾ ಪುನರುಚ್ಛರಿಸಿದ್ದಾರೆ.

ಇನ್ನು, ‘2ಜಿ ತೀರ್ಪಿನಲ್ಲಿ ನ್ಯಾಯಮೂರ್ತಿ ಸೈನಿ ಅವರ ನಾಲ್ಕು ಅಂಶಗಳ ಸಾರಾಂಶವು ಇಲ್ಲಿಯೂ ಅನ್ವಯಿಸುತ್ತದೆ. ತಪ್ಪಾಗಿ ಓದುವುದು, ಆಯ್ದ ಓದುವಿಕೆ, ಸಂದರ್ಭದ ಓದುವಿಕೆ ಮತ್ತು ಓದದಿರುವುದು’ ಎಂದು ಉನ್ನತ ಮಟ್ಟದ 2 ಜಿ ಪ್ರಕರಣವನ್ನು ಉಲ್ಲೇಖಿಸಿ ಡಿ ಎಮ್ ಕೆ ನಾಯಕ ಎ ರಾಜಾ ಪ್ರತಿಕ್ರಿಯಿಸಿದ್ದಾರೆ.

ಓದಿ : ಚೀಲೂರು ಗ್ರಾಮದಲ್ಲಿ ನಿಖಿಲ್‌ ಕುಮಾರಸ್ವಾಮಿಗೆ ಭರ್ಜರಿ ಸ್ವಾಗತ

Advertisement

Udayavani is now on Telegram. Click here to join our channel and stay updated with the latest news.

Next