Advertisement

ಜಯಾ ವಿಲ್‌ಗಾಗಿ ಎಸ್ಟೇಟ್‌ ಕಾವಲುಗಾರನ ಹತ್ಯೆ? 

10:39 AM May 03, 2017 | Team Udayavani |

ಚೆನ್ನೈ: ಮಾಜಿ ಮುಖ್ಯಮಂತ್ರಿ, ದಿವಂಗತ ಜೆ. ಜಯಲಲಿತಾ ಅವರ ವಿಲ್‌ಗಾಗಿ ಕೊಡನಾಡ್‌ ಎಸ್ಟೇಟ್‌ ಕಾವಲುಗಾರನ ಹತ್ಯೆ ನಡೆದಿರಬಹುದು ಎಂದು ತಮಿಳುನಾಡು ಪೊಲೀಸರು ಶಂಕಿಸಿದ್ದಾರೆ. ಹತ್ಯೆ ಮಾಡಿ ಎಸ್ಟೇಟ್‌ನಲ್ಲಿರುವ ಮನೆಗಳಲ್ಲಿ ಹುಡುಕಾಟ ನಡೆಸಿರುವುದನ್ನೆಲ್ಲ ಗಮನಿಸಿದಾಗ ಈ ಅನುಮಾನ ಬಲವಾಗಿಯೇ ಕಾಡುತ್ತಿರುವುದಾಗಿ ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ಪ್ರಕರಣಕ್ಕೆ ಸಂಬಂಧಿಸಿ ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಹಾಗೂ ಪ್ರಮುಖ ಸಾಕ್ಷಿದಾರನೂ ಆಗಿರುವ ಕೆ.ವಿ.ಸಯಾನ್‌ ವಿಚಾರಣೆ ನಡೆಸಿರುವ ಪೊಲೀಸರಿಗೆ ಜಯಾ ಅವರ ವಿಲ್‌ಗಾಗಿಯೇ ಈ ಹತ್ಯೆ ನಡೆದಿರಬಹುದು, ಇದರ ಹುಡುಕಾಟದ ವೇಳೆ ಕೈಗೆ ಸಿಕ್ಕ ನಗದು ದೋಚಿರಬಹುದು. ಜಯಲಲಿತಾ ಅವರಿಗೆ ಸೇರಿದ ಆಸ್ತಿ ದಾಖಲೆಗಳೂ ಕಾಣಿಸದೇ ಇರುವುದು ಈ ಅನುಮಾನವನ್ನು ಇನ್ನಷ್ಟು ಬಲಗೊಳಿಸುತ್ತದೆ ಎಂದು ಪೊಲೀಸ್‌ ಮೂಲಗಳು ಹೇಳಿದ್ದಾಗಿ ವರದಿಯಾಗಿದೆ.

ಪ್ರಕರಣದ ತನಿಖೆ ನಡೆಯುತ್ತಿದ್ದು, ಈಗಾಗಲೇ ಸಿಕ್ಕಿರುವ ಮಾಹಿತಿಯನ್ನಾಧರಿಸಿ ತಮಿಳುನಾಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎನ್ನಲಾಗಿದೆ. ಏಪ್ರಿಲ್‌ 23ರಂದು ಮೂರು ವಾಹನಗಳಲ್ಲಿ ಎಸ್ಟೇಟ್‌ಗೆ ನುಗ್ಗಿದ 11ಕ್ಕೂ ಹೆಚ್ಚು ಮಂದಿ ಇದ್ದ ಗುಂಪು ಈ ಕೃತ್ಯವೆಸಗಿ ಪರಾರಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next