Advertisement

ಡಿಎಂಕೆ ನಿಯೋಗ ರಾಷ್ಟ್ರಪತಿ ಭೇಟಿ

07:30 AM Sep 01, 2017 | |

ಹೊಸದಿಲ್ಲಿ: ತಮಿಳುನಾಡಿನ ರಾಜಕೀಯ ಬಿಕ್ಕಟ್ಟು ಈಗ ರಾಷ್ಟ್ರಪತಿ ಭವನ ತಲುಪಿದೆ. ಡಿಎಂಕೆ ನೇತೃತ್ವದ ವಿಪಕ್ಷಗಳ ನಿಯೋಗ ಗುರುವಾರ ರಾಷ್ಟ್ರಪತಿ ಕೋವಿಂದ್‌ರನ್ನು ಭೇಟಿಯಾಗಿ, ವಿಧಾನಸಭೆಯಲ್ಲಿ ಪಳನಿಸ್ವಾಮಿ ಸರಕಾರ ಬಹುಮತ ಸಾಬೀತು ಪಡಿಸುವಂತೆ ರಾಜ್ಯಪಾಲರಿಗೆ ಸೂಚನೆ ಕೊಡಿ ಎಂದು ಮನವಿ ಮಾಡಿದೆ. ನಿಯೋಗದಲ್ಲಿ ಸಿಪಿಎಂ ನಾಯಕ ಯೆಚೂರಿ, ಸಿಪಿಐನ ಡಿ. ರಾಜಾ, ಕಾಂಗ್ರೆಸ್‌ನ ಆನಂದ್‌ ಶರ್ಮಾ ಇದ್ದರು. 19 ಶಾಸಕರು ಸರಕಾರಕ್ಕೆ ನೀಡಿದ್ದ ಬೆಂಬಲ ವಾಪಸ್‌ ಪಡೆದಿರುವ ಕಾರಣ, ವಿಶ್ವಾಸಮತ ನಡೆಯಲೇಬೇಕು ಎಂದು ಅವರು ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next