Advertisement

ಕರುಣಾನಿಧಿ ಸ್ಥಿತಿ ಗಂಭೀರ: ಮನೆಯಲ್ಲೆ ಚಿಕಿತ್ಸೆ;ಗಣ್ಯಾತೀಗಣ್ಯರ ದೌಡು

09:47 AM Jul 27, 2018 | Team Udayavani |

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಡಿಎಂಕೆ ಅಧಿನಾಯಕ 94 ರ ಹರೆಯದ ಕರುಣಾನಿಧಿ ಅವರ ಆರೋಗ್ಯ ಸ್ಥಿತಿ ಗಂಭೀರ ಸ್ವರೂಪಕ್ಕೆ ತಲುಪಿದೆ. 

Advertisement

ಮನೆಯಲ್ಲೇ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು , ಕಾವೇರಿ ಆಸ್ಪತ್ರೆಯ ವೈದ್ಯರ ತಂಡ ನಿಗಾ ವಹಿಸಿದೆ. ಮೂತ್ರ ನಾಳದ ಸೊಂಕಿನಿಂದಲೂ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ. 

ಗೋಪಾಲಪುರಂನಲ್ಲಿರುವ ನಿವಾಸಕ್ಕೆ ಡಿಎಂಕೆ ಮುಖಂಡರು,ಉಪ ಮುಖ್ಯಮಂತ್ರಿ ಪನೀರ್‌ಸೆಲ್ವಂ , ನಟ ಕಮಲಹಾಸನ್‌ ಸೇರಿದಂತೆ ಗಣ್ಯಾತೀಗಣ್ಯರು ಭೇಟಿ ನೀಡಿದ್ದಾರೆ. 

ಕಳೆದ ಕೆಲ ದಿನಗಳಿಂದ ವಯೋ ಸಹಜ ಅನಾರೋಗ್ಯದಿಂದ ತಂದೆ ಬಳಲುತ್ತಿದ್ದರು ಎಂದು ಪುತ್ರ ಸ್ಟಾಲಿನ್‌ ಹೇಳಿದ್ದಾರೆ. 

ಮನೆಯ ಹೊರಗೆ ನೂರಾರು ಡಿಎಂಕೆ ಕಾರ್ಯಕರ್ತರು ಜಮಾವಣೆಗೊಳ್ಳುತ್ತಿದ್ದು, ಭದ್ರತೆಗಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next