Advertisement

ಸಾಲ ಕೊಟ್ರೆ ಮನ್ನಾ  ಯಾವಾಗ ಅಂತಾರೆ

10:35 AM Mar 04, 2019 | |

ಕುದೂರು: ರೈತರಿಗೆ ಸಾಲ ನೀಡಿದರೆ ಸರ್ಕಾರ ಯಾವಾಗ ಮನ್ನಾ ಮಾಡುತ್ತದೆ ಎಂದುಹೇಳುತ್ತಾರೆ. ಆದರೆ, ಸ್ತ್ರೀಶಕ್ತಿ ಸಂಘಗಳಿಗೆನೀಡಿದರೆ ಸಾಲ ಶೇ.100 ಪಾವತಿಸುತ್ತಾರೆ. ಅವರ ನಿಷ್ಠೆ ತೋರುತ್ತದೆ ಎಂದು ಸಂಸದ ಡಿ.ಕೆ.ಸುರೇಶ್‌ ಹೇಳಿದರು.

Advertisement

ಕುದೂರು ಹೋಬಳಿಯ ನಾರಸಂದ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಸಂಜೀವಿನಿ ಮಹಿಳಾ ಮತ್ತು ಮಕ್ಕಳ ಇಲಾಖೆ ಸಮುದಾಯ ಬಂಡಾವಳ ವಿಧಿ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಕಳೆದ 2 ವರ್ಷಗಳಿಂದ 112 ಕೋಟಿ ರೂ. ರೈತರ ಸಾಲ ಮನ್ನಾವಾಗಿದೆ. ಇಷ್ಟು ಆಗಿದ್ದರೂ ಮತ್ತೆ ಯಾವಾಗ ಸಾಲ ಕೊಡುತ್ತಿರಾ ರಾಹುಲ್‌ ಗಾಂಧಿ ಸರ್ಕಾರ ಬರುತ್ತಾ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಾ, ಯಾರು ಸಾಲ ಮನ್ನಾಮಾಡುತ್ತಾರೆ. ಇದನ್ನೇ ಕೇಳುತ್ತಾರೆ ವಿನಃ ಕೃತಜ್ಞತೆಯನ್ನು ತೋರಿಸುವುದೇ ಇಲ್ಲ. ಆದರೆ, ಸ್ತ್ರೀ ಶಕ್ತಿ ಸಂಘಗಳಿಗೆ ನೀಡಿದ ಸಾಲವನ್ನು ಪಾವತಿ ಮಾಡುತ್ತಾರೆ. ಸರ್ಕಾರ ಇಂತಹವರಿಗೆ ಹೆಚ್ಚಿನ ಒತ್ತನ್ನು ಕೊಡಬೇಕು ಎಂದು ಹೇಳಿದರು.

ಸಣ್ಣಕೈಗಾರಿಕೆ ಸ್ಥಾಪಿಸಿ: ರಾಜ್ಯ ಸರ್ಕಾರಶೂನ್ಯ ಬಡ್ಡಿ ದರದಲ್ಲಿ ತಮ್ಮ ಉಳಿತಾಯದ ಆಧಾರದ ಮೇಲೆ ಸಾಲ ವಿತರಣೆಮಾಡುತ್ತಿದ್ದು, ಸ್ತ್ರೀಶಕ್ತಿ ಸಂಘದವರು ಸಣ್ಣ ಕೈಗಾರಿಕೆಗಳ ಮೂಲಕ ಹೆಚ್ಚಿನ ಪದಾರ್ಥಗಳನ್ನು ಉತ್ಪಾದಿಸಿ ಸರ್ಕಾರದ ಮೂಲಕವೇ ಮಾರಾಟ ಮಾಡಿ ಅರ್ಥಿಕವಾಗಿ ಸ್ತ್ರೀ mಶಕ್ತಿ ಸಂಘಗಳು ಮುಂದೆ ಬರಲಿ ಎಂದರು.

ರಸ್ತೆ ಕಾಮಗಾರಿಗೆ ಚಾಲನೆ: ಶಾಸಕ ಎ. ಮಂಜುನಾಥ್‌ ಮಾತನಾಡಿ, ಎಸ್‌.ಎಂ.ಕೃಷ್ ಮಖ್ಯಮಂತ್ರಿಗಳಾಗಿದ್ದಾಗ ಸ್ತ್ರೀ ಶಕ್ತಿ ಸಂಘಗಳನ್ನು ಆರಂಭಿಸಿದ್ದರು. ಈಗ ಸ್ತ್ರೀ ಶಕ್ತಿ ಸಂಘಗಳು ಬಹಳಷ್ಟು ಬಲಿಷ್ಠವಾಗಿದ್ದು, ಸಂಜೀವಿನಿ ಯೋಜನೆಯಡಿ ಒಕ್ಕೂಟದಿಂದ 10 ಲಕ್ಷ ರೂ.ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ನೀಡಲಾಗಿದೆ. ಈ ಹಣದಲ್ಲ ಹೈನುಗಾರಿಕೆ, ಕೋಳಿ ಸಾಕಾಣಿಕೆ ಸೇರಿದಂತೆ ಆದಾಯ ಬರುವ ಉದ್ಯಮಗಳಲ್ಲಿ ತೊಡಗಿಸಿ ಸಾಲ ಪಾವತಿ ಮಾಡಬೇಕು. ಮಾಡ್‌ಬಾಳ್‌ನಲ್ಲಿ ಬಿಡಿಸಿಸಿ ಬ್ಯಾಂಕ್‌ನ ಹೊಸ ಖಾತೆ ತೆರೆಯಬೇಕು. ಮುಂದಿನ ಗುರುವಾರ ಮುಖ್ಯಮಂತ್ರಿ  ಎಚ್‌.ಡಿ.ಕುಮಾರಸ್ವಾಮಿಅವರಿಂದ ನಾಲ್ಕುಪಥದ ರಸ್ತೆ ಕಾಮಗಾರಿಗೆಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಸಾಲ ಮನ್ನಾ ಹಾಗಲ್ಲ: ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಸ್‌.ರವಿ ಮಾತನಾಡಿ, 15 ಸ್ತ್ರೀಶಕ್ತಿ ಸಂಘಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಬಿಡಿಸಿಸಿ ಬ್ಯಾಂಕ್‌ ವತಿಯಿಂದ ಸಾಲ ಕೊಡುತ್ತಿದ್ದೇವೆ. ಬೇರೆ ಸಂಸ್ಥೆಗಳಲ್ಲಿ  ವಾರ್ಷಿಕ 14 ರಿಂದ 15 ರೂ. ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತಿದ್ದಾರೆ. ನಮ್ಮ ಬಳಿಯೇ ಸ್ತ್ರೀ ಶಕ್ತಿ ಸಂಘಗಳು ಸಾಲ ಪಡೆಯಬೇಕು. ಯಾವುದೇ ಕಾರಣಕ್ಕೂ ಸಾಲ ಮನ್ನಾವಾಗು ವುದಿಲ್ಲ. ತಿಪ್ಪಸಂದ್ರ ಹೋಬಳಿಯಲ್ಲಿ ಬಿಡಿಸಿಸಿ ಬ್ಯಾಂಕ್‌ ಶಾಖೆ ತೆರೆಯುವುದು ಅವಶ್ಯಕತದೆ ಎಂದು ಹೇಳಿದರು.ಜಿಪಂ ಸದಸ್ಯ ಎಚ್‌.ಎನ್‌.ಅಶೋಕ್‌ಮಾತನಾಡಿ, ಹಿಂದಿನ ಕಾಂಗ್ರೆಸ್‌ ಸರ್ಕಾರ ಹಾಗೂ ಈಗಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಾಗಡಿ ತಾಲೂಕಿನಲ್ಲಿ 2 ವರ್ಷದ ಅವಧಿಯಲ್ಲಿ 112 ಕೋಟಿ ರೂ.ಸಾಲ ಮನ್ನಾವಾಗಿದ್ದು, ಈ ವರ್ಷ 72 ಕೋಟಿ ರೂ. ಸಾಲ ವಿತರಣೆ ಮಾಡಲಾಗಿದೆ. 2 ಸರ್ಕಾರಗಳು ರೈತರ ಮೇಲೆ ಇಟ್ಟಿರುವ ಕಾಳಜಿಯನ್ನು ತಿಳಿಯಬಹುದು ಎಂದು ತಿಳಿಸಿದರು.

ಗಾರ್ಮೆಂಟ್ಸ್‌ ಸ್ಥಾಪಿಸಿ: ಜಿಪಂ ಸದಸ್ಯೆ ದಿವ್ಯಾ ಗಂಗಾಧರ್‌ ಮಾತನಾಡಿ, ಸ್ತ್ರೀ ಶಕ್ತಿ ಸಂಘಗಳಿಗೆ ಸಾಲವನ್ನು ಕೊಡುತ್ತಿದ್ದಾರೆ. ಇದರ ಬದಲು ಸಂಸದ ಡಿ.ಕೆ.ಸುರೇಶ್‌ ಮತ್ತು ಶಾಸಕ ಎ.ಮಂಜು ನಾಥ್‌ ತಿಪ್ಪಸಂದ್ರ ಹೋಬಳಿಯಲ್ಲಿ ಒಂದು ಗಾರ್ಮೆಂಟ್ಸ್‌ ನಿರ್ಮಾಣ ಮಾಡಿದರೇ ಭಾಗದ ಮಹಿಳೆಯರಿಗೆ ಅರ್ಥಿಕ ಬೆಂಬಲ ನೀಡಿದಂತಾಗುತ್ತದೆ. ಸಾಲ ಪಡೆಯುವುದು ತಪ್ಪುತ್ತದೆ, ಇದನ್ನು ಕೂಡಲೇ ಮಾಡಬೇಕು ಎಂದು ಒತ್ತಾಯಿಸಿದರು.

Advertisement

ಸೌಲಭ್ಯ ವಿತರಣೆ: ಮಾಗಡಿ ತಾಲೂಕಿನ ಸಂಕೀಘಟ್ಟ, ಸಾತನೂರು, ನೇತೇನಹಳಿÉ, ಸೀಗೆಕುಪ್ಪೆ, ಗ್ರಾಪಂನ ಸ್ತ್ರೀ ಶಕ್ತಿ ಸಂಘಗಳಿಗೆ ಸಂಜೀವಿನಿ ಯೋಜನೆಯಡಿ ಸಮುದಾಯ ಬಂಡಾವಳ ನಿಧಿಯ 10 ಕೋಟಿ ರೂ. ಸಾಲದ ಚೆಕ್‌ನ್ನು ವಿತರಿಸಲಾಯಿತು.

ಮಾದಿ ಗೊಂಡನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಕೆಂಚೇಗೌಡ ಕುದೂರು ಹೋಬಳಿ ವ್ಯಾಪ್ತಿಯಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಯಡಿ ಬಾಂಡ್‌ ವಿತರಿಸಿದರು. ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೃಷ್ಣಮೂರ್ತಿ, ಬಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ರವೀಶಯ್ಯ, ಬಮೂಲ್‌ ನಿರ್ದೇಶಕ ನರಸಿಂಹಮೂರ್ತಿ, ಜಿಪಂ ಸದಸ್ಯ ಅಣ್ಣೇಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯನಾಯ್ಕ, ತಾಪಂ ಅಧ್ಯಕ್ಷ ಶಿವರಾಜು, ನಾರಸಂದ್ರ ಗ್ರಾಪಂ ಅಧ್ಯಕ್ಷೆ ರಂಗಮ್ಮ ಇತರರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next