Advertisement

ಡಿಕೆಶಿ ಪದಗ್ರಹಣ ಯಶಸ್ವಿ

06:24 AM Jul 03, 2020 | Lakshmi GovindaRaj |

ಚನ್ನರಾಯಪಟ್ಟಣ/ನುಗ್ಗೇಹಳ್ಳಿ: ತಾಲೂಕಿನ 36 ಗ್ರಾಮ ಪಂಚಾಯಿತಿ ಗಳ ಸಂಚರಿಸಿ ಸಂಘಟನೆ ಮಾಡಿ ಡಿಕೆಶಿ ಪದಗ್ರಹಣ ಕಾರ್ಯಕ್ರಮ ಯಶಸ್ವಿ ಗೊಳಿಸಲಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎಂ.ಎ. ಗೋಪಾಲ ಸ್ವಾಮಿ  ತಿಳಿಸಿದರು.

Advertisement

ತಾಲೂಕಿನ ನುಗ್ಗೇಹಳ್ಳಿ ಹೋಬಳಿ ಜಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ಯಲ್ಲಿ ಡಿಕೆಶಿ ಪದಗ್ರಹಣ ಕಾರ್ಯ ಕ್ರಮದ ನಿಮಿತ್ತ ಆಯೋಜಿಸಿದ್ದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯುವ ಕಾಂಗ್ರೆಸ್‌,  ಎನ್‌ಎಸ್‌ ಯು, ಸಾಮಾಜಿಕ ಮಾಧ್ಯಮದ ತಂಡದವರು ಕಳೆದ ಒಂದು ತಿಂಗಳನಿಂದ ಹಗಲಿರುಳೂ ಶ್ರಮಿ ಸಿದ್ದರ ಪ್ರತಿಫ‌ಲವಾಗಿ ಇಂದು ಕಾರ್ಯಕ್ರಮ ವಿನೂತನವಾಗಿ ಮೂಡಿ ಬಂದಿದೆ ಎಂದರು.

ತಾಲೂಕಿನಲ್ಲಿ 42 ಕಡೆಯಲ್ಲಿ  ಸುಮಾರು 15 ಸಾವಿರ ಮಂದಿ ಏಕ ಕಾಲಕ್ಕೆ ಡಿ.ಕೆ.ಶಿವಕುಮಾರ್‌ ಪದಗ್ರಹಣ ವೇಳೆ ಪ್ರತಿಜ್ಞಾ ವಿಧಿ ಸ್ವೀಕರಿಸುವ ಮೂಲಕ ಪಕ್ಷ ಸಂಘಟನೆಗೆ ಒತ್ತು ನೀಡಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮದ ನೇತೃತ್ವವಹಿಸಿದ್ದ ಯುವ ಕಾಂಗ್ರೆಸ್‌  ಪದಾಧಿಕಾರಿಗಳಾದ ಕಾರ್ತೀಕ್‌, ಕಲ್ಕೆರೆ ಮೋಹನ್‌, ನವೀನ್‌, ವೇಣು, ಕಿರಣ, ವೀಕ್ಷಕಿ ಕಮಲಾಕ್ಷಿ, ಹಿರೀಸಾವೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಕೆ.ಮಂಜೇಗೌಡ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next