Advertisement

ಚಾಮುಂಡೇಶ್ವರಿಗೆ ಬೆಳ್ಳಿ ಆನೆನೀಡಿ ಹರಕೆ ತೀರಿಸಿದ ಡಿಕೆಶಿ

08:17 AM Sep 26, 2017 | Team Udayavani |

ಮೈಸೂರು: ಶರನ್ನವರಾತ್ರಿ ಹಿನ್ನೆಲೆಯಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಸೋಮವಾರ ಕುಟುಂಬ ಸಮೇತರಾಗಿ ಚಾಮುಂಡಿಬೆಟ್ಟಕ್ಕೆ ಆಗಮಿಸಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿದರು.

Advertisement

ತಲಾ 15 ಕೆ.ಜಿ. ತೂಕದ ಎರಡು ಬೆಳ್ಳಿಯ ಆನೆಗಳನ್ನು ದೇವಿಗೆ ಕಾಣಿಕೆಯಾಗಿ ನೀಡಿದರು. ಕಳೆದ ತಿಂಗಳಷ್ಟೇ ತಮ್ಮ ಮೇಲೆ ಐಟಿ ದಾಳಿ ನಡೆದ ನಂತರ ಚಾಮುಂಡಿಬೆಟ್ಟಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದ ಡಿ.ಕೆ.ಶಿವಕುಮಾರ್‌ ಮತ್ತು ಕುಟುಂಬದವರು, ನವರಾತ್ರಿ ಸಂದರ್ಭದಲ್ಲಿ ದೇವಿಗೆ ಹರಕೆ ತೀರಿಸಿದರೆ ಒಳಿತಾಗುತ್ತದೆಂಬ ಸಲಹೆಯಂತೆ ಸೋಮವಾರ ಬೆಟ್ಟಕ್ಕೆ ಬಂದು ಕಾಣಿಕೆ ಒಪ್ಪಿಸಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ದೇವಿ ಮತ್ತು ಭಕ್ತನ ನಡುವಿನ ವಿಚಾರ. ಈ ಹಿಂದೆ ಮಾಡಿಕೊಂಡಿದ್ದ ಹರಕೆಯಂತೆ 30ಕೆ.ಜಿ. ತೂಕದ ಆನೆಗಳನ್ನು ದೇವಿಗೆ ಅರ್ಪಿಸಿದ್ದೇನೆ. ಮನಸ್ಸಿನಲ್ಲಿರುವ ಕಷ್ಟಗಳನ್ನು ಬಹಿರಂಗವಾಗಿ ಹೇಳಿಕೊಳ್ಳಲಾಗುವುದಿಲ್ಲ, ಆದರೆ, ಎದುರಾಗಿರುವ ಸಂಕಷ್ಟಗಳನ್ನು ತಾಯಿ ನಿವಾರಣೆ ಮಾಡುತ್ತಾಳೆಂಬ ನಂಬಿಕೆಯಿಂದ ದರ್ಶನಕ್ಕೆ ಬಂದಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next