Advertisement
ಇದೇ ವೇಳೆ ತುರ್ತು ಸೇವೆಯನ್ನು ಬಯಸಿ ಆಸ್ಪತ್ರೆಗೆ ಬಂದ ರೋಗಿಗಳಿಗೆ ವೈದ್ಯರು ಮಾನವೀಯ ನೆಲೆಯಲ್ಲಿ ಅವಶ್ಯ ಸೇವೆ ಮತ್ತು ಚಿಕಿತ್ಸೆಯನ್ನು ಒದಗಿಸುವ ಮೂಲಕ ತಮ್ಮ ಕರ್ತವ್ಯ ನಿಷ್ಠೆಯನ್ನು ಮೆರೆದರು.
Related Articles
Advertisement
ದೇರಳಕಟ್ಟೆಯಲ್ಲಿ ಇತ್ತೀಚೆಗೆ ವೈದ್ಯರ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಮಾತ್ರ ಬಂಧಿಸಲಾಗಿದೆ. ಉಳಿದ ಆರೋಪಿಗಳ ವಿರುದ್ಧ ಕ್ರಮ ಆಗಿಲ್ಲ ಎಂದ ಅವರು ಎಲ್ಲ ಆರೋಪಿಗಳನ್ನು ಬಂಧಿಸಿ ಶಿಕ್ಷಿಸಬೇಕು ಎಂದು ಒತ್ತಾಯಿಸಿದರು.
ಇಂತಹ ಘಟನೆಗಳು ವೈದ್ಯಕೀಯ ಕಾಶಿ ಎಂದು ಕರೆಯಲಾಗುವ ಮಂಗಳೂರಿಗೆ ಅವಮಾನ. ಸರಕಾರ ಮತ್ತು ಪೊಲೀಸರು ವೈದ್ಯರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಇಂತಹ ಘಟನೆ ಮರುಕಳಿಸ ಬಾರದು ಎಂದರು. ಪ್ರತಿಭಟನೆಯಲ್ಲಿ ಭಾಗವಹಿಸಿದ ವೈದ್ಯರು ಮತ್ತು ವೈದ್ಯಕೀಯ ಸಿಬಂದಿಯನ್ನು ಅಭಿನಂದಿಸಿದ ಅವರು ಇಂತಹ ಏಕತೆ ಮುಂದುವರಿಯಲಿ. ಮುಂದೆ ಇಂತಹ ಘಟನೆ ನಡೆದರೆ ಉಪವಾಸ ಸತ್ಯಾಗ್ರಹಕ್ಕೂ ಹಿಂಜರಿಯ ಬಾರದು ಎಂದು ಹೇಳಿದರು.
ಅತ್ತಾವರ ಕೆ.ಎಂ.ಸಿ. ಆಸ್ಪತ್ರೆಯ ಆಶ್ರಯ ಧಾಮದ ನಿವಾಸಿ ಶ್ರೀನಿವಾಸ್ ಕಾಮತ್ ಮಾತನಾಡಿ ವೈದ್ಯರನ್ನು ಹೊಡೆಯಬಾರದು. ಅವಶ್ಯ ಬಿದ್ದರೆ ಪ್ರಕರಣ ದಾಖಲಿಸಿ ಕಾನೂನಿನ ಮೊರೆ ಹೋಗಬಹುದು ಎಂದರು.
ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಘಟಕ, ಅಸೋಸಿಯೇಶನ್ ಆಫ್ ಮೆಡಿಕಲ್ ಕನ್ಸಲ್ಟೆಂಟ್ಸ್, ಇಂಡಿಯನ್ ಡೆಂಟಲ್ ಅಸೋಸಿಯೇಶನ್ ಮತ್ತು ಸರ್ವ ವೈದ್ಯರ ಸಂಘಟನೆಗಳ ಪ್ರತಿನಿಧಿಗಳಾದ ಡಾ| ಕೆ.ಆರ್. ಕಾಮತ್, ಡಾ| ಕದ್ರಿ ಯೋಗೇಶ್ ಬಂಗೇರ, ಡಾ| ಅನಂತ ರಾವ್ ಪ್ರಸಾದ್, ಡಾ| ಅಣ್ಣಯ್ಯ ಕುಲಾಲ್, ಡಾ| ಸಂತೋಷ್ ಸೋನ್ಸ್, ಡಾ| ಭರತ್ ಶೆಟ್ಟಿ, ಡಾ| ದಿವಾಕರ್ ಅವರು ಮಾತನಾಡಿದರು. ಡಾ| ಗುರುಪ್ರಸಾದ್ ಭಟ್, ಡಾ| ಸುಧೀರ್ ಹೆಗ್ಡೆ, ಡಾ| ಸತೀಶ್ ಭಟ್, ಡಾ| ಇರ್ಫಾನ್, ಡಾ| ವಿಕ್ರಂ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಡಾ| ಕೆ.ಆರ್. ಕಾಮತ್ ವಂದಿಸಿದರು.
ಪ್ರತಿಭಟನ ಸಭೆಯ ಬಳಿಕ ಸಂಘದ ನಿಯೋಗವೊಂದು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿತು. ಮಂಗಳೂರು ನಗರ ಸಹಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಎಲ್ಲ ವೈದ್ಯರು, ದಂತ ವೈದ್ಯರು, ಅರೆ ವೈದ್ಯಕೀಯ ಸಿಬಂದಿ, ನರ್ಸ್ಗಳು. ಫಿಸಿಯೋಥೆರಪಿ ವೈದ್ಯರು, ವೈದ್ಯಕೀಯ ಸೇವಾ ನಿರತ ಸಿಬಂದಿ, ವೈದ್ಯಕೀಯ ವಿದ್ಯಾರ್ಥಿಗಳು, ಪೋಷಕರು, ಸಮಾನ ಮನಸ್ಕ ನಾಗರಿಕರು, ಲಯನ್ಸ್, ರೋಟರಿ ಸಂಸ್ಥೆಗಳ ಸದಸ್ಯರು ಭಾಗವಹಿಸಿದ್ದರು.