Advertisement

ದ.ಕ.- ಉಡುಪಿ ಅಂತರ್‌ ಜಿಲ್ಲಾ ಓಡಾಟಕ್ಕೆ ಇನ್ನು ಪಾಸ್‌ ಬೇಕಿಲ್ಲ

08:28 AM May 12, 2020 | Sriram |

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ನಡುವೆ ಜನ ಸಂಚಾರಕ್ಕೆ ಇದ್ದ ನಿರ್ಬಂಧವನ್ನು ರಾಜ್ಯ ಸರಕಾರ ಸಡಿಲಿಕೆ ಮಾಡಿದ್ದು, ಇನ್ನು ಮುಂದೆ ಉಭಯ ಜಿಲ್ಲೆಗಳ ಉದ್ಯೋಗಿಗಳು ಬೆಳಗ್ಗೆ 7 ರಿಂದ ಸಂಜೆ 7 ಗಂಟೆ ವರೆಗೆ ಯಾವುದೇ ಅಂತರ್‌ ಜಿಲ್ಲಾ ಪಾಸ್‌ ಇಲ್ಲದೆ ಸಂಚರಿಸ ಬಹುದಾಗಿದೆ.

Advertisement

ಈ ಬಗ್ಗೆ ರಾಜ್ಯ ಸರಕಾರ ಹೊಸ ಆದೇಶ ಹೊರಡಿಸಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಒಂದೇ ಘಟಕವನ್ನಾಗಿ ಪರಿಗಣಿಸಲು ಎರಡೂ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದೆ.

ಸಾರ್ವಜನಿಕರು ತಾವು ಕೆಲಸ ಮಾಡುತ್ತಿರುವ ಕಂಪೆನಿ/ ಸಂಸ್ಥೆಯಿಂದ ನೀಡಲಾಗುವ ಪತ್ರದ ಮೇರೆಗೆ ಹಾಗೂ ಕಂಪೆನಿ/ ಸಂಸ್ಥೆಯ ಗುರುತು ಚೀಟಿಯೊಂದಿಗೆ ಮಾತ್ರ ಈ ಚಲನವಲನಗಳಿಗೆ ಅನುಮತಿ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಜನರ ಸಂಚಾರಕ್ಕೆ ಸಂಬಂಧಿಸಿ ಅವಿಭಜಿತ (ದಕ್ಷಿಣ ಕನ್ನಡ ಮತ್ತು ಉಡುಪಿ) ದಕ್ಷಿಣ ಕನ್ನಡ ಜಿಲ್ಲೆಗಳನ್ನು ಒಂದೇ ಘಟಕವನ್ನಾಗಿ ಪರಿಗಣಿಸ ಬೇಕು ಹಾಗೂ ನಿರ್ಬಂಧವನ್ನು ರದ್ದು ಸಡಿಲಿಸ ಬೇಕೆಂದು ಕೆನರಾ ಛೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರಿ ವತಿಯಿಂದಲೂ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next