Advertisement

ಸರಕಾರದ ಕೋವಿಡ್ ವೈಫಲ್ಯ ಮುಚ್ಚಿಡಲು ಡ್ರಗ್ಸ್ ದಂಧೆ ಒಂದು ಅಸ್ತ್ರ :ಡಿ.ಕೆ.ಸುರೇಶ್‌

01:13 PM Sep 12, 2020 | sudhir |

ಹಾಸನ: ಕೋವಿಡ್ ನಿಯಂತ್ರಣದಲ್ಲಿ ವಿಫ‌ಲವಾಗಿರುವ ರಾಜ್ಯ ಸರ್ಕಾರ ಜನರ ಗಮನ ಬೇರೆಡೆಗೆ ಸೆಳೆಯಲು ಡ್ರಗ್ಸ್‌ ದಂಧೆಯ ಆರೋಪಿಗಳೆಂದು ಚಿತ್ರನಟಿಯವರನ್ನು ಬಂಧಿಸಿದೆ. ಇದರಿಂದ ಕನ್ನಡ ಚಿತ್ರರಂಗಕ್ಕೂ ಕೆಟ್ಟ ಹೆಸರು ಬಂದಿದೆ ಎಂದು ಸಂಸದ ಡಿ.ಕೆ.ಸುರೇಶ್‌ ಆರೋಪಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕೋವಿಡ್ ವೈಫ‌ಲ್ಯ ಮಚ್ಚಿಕೊಳ್ಳಲು ರಾಮಮಂದಿರ ನಿರ್ಮಾಣದ ವಿಷಯವನ್ನು ಎತ್ತಿಕೊಂಡು ಜನರ ಮನಸ್ಸನ್ನು ಬೇರೆಡೆಗೆ ಸೆಳೆಯಿತು. ರಾಜ್ಯದಲ್ಲಿ ಕೋವಿಡ್ ದಿನೇದಿನೆ ಹೆಚ್ಚಳವಾಗುತ್ತಿದೆ. ಜೊತೆಗೆ ಅತಿವೃಷ್ಟಿಯ ಹಾನಿಯಾಗಿದ್ದರೂ ಪರಿಹಾರ ಕಾರ್ಯ ಕೈಗೊಳ್ಳಲಾಗದ ಸರ್ಕಾರ, ಈಗ ಚಿತ್ರ ನಟಿಯರನ್ನು ಬಂಧಿಸಿ ಜನರನ್ನು ದಿಕ್ಕಿ ತಪ್ಪಿಸುವ ತಂತ್ರಗಾರಿಕೆಯನ್ನು ಮಾಡುತ್ತಿದೆ ಎಂದು ಆರೋಪಿಸಿದರು.

ಡಗ್ಸ್‌ ಪೆಡ್ಲರ್‌ಗಳನ್ನು ಬಂಧಿಸುವುದನ್ನು ಬಿಟ್ಟು ಚಿತ್ರ ನಟಿಯರನ್ನು ಬಂಧಿಸಿ ಸರ್ಕಾರ ಮತ್ತು ಪೊಲೀಸ್‌ ಇಲಾಖೆ ಜನರ ಗಮನವನ್ನು ಕೋವಿಡ್ ನಿಂದ ಬೇರಡೆಗೆ ಸೆಳೆಯುತ್ತಿದೆ.

ಡ್ರಗ್ಸ್‌ ದಂಧೆ ಮಟ್ಟ ಹಾಕುವವರು ಇದುವರೆಗೂ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದ ಸುರೇಶ್‌, ಸರ್ಕಾರದಿಂದ ಕೋವಿಡ್ ನಿಯಂತ್ರಣ ಸಾಧ್ಯವಿಲ್ಲದ ಪರಿಸ್ಥಿಗೆ ತಲುಪಿದೆ. ಹಾಗಾಗಿ ಕಾಂಗ್ರೆಸ್‌ ಕಾರ್ಯಕರ್ತರು ಜನರ ಬಳಿಗೆ ತೆರಳಿ ಕೈಲಾದ ಸಹಾಯ ಮಾಡುವರು. ಆ ನಿಟ್ಟಿನಲ್ಲಿ ಆರೋಗ್ಯ ಹಸ್ತ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next