Advertisement

ಭ್ರಷ್ಟಾಚಾರ ಮುಚ್ಚಿ ಹಾಕಲು ಕೇಂದ್ರದ ಅಧಿಕಾರ ದುರ್ಬಳಕೆ: ಡಿ.ಕೆ. ಸುರೇಶ್‌

11:15 PM Dec 18, 2022 | Team Udayavani |

ಕಾರ್ಕಳ: ಕಾಂಗ್ರೆಸ್‌ ಎಂದಿಗೂ ಉಗ್ರಗಾಮಿಗಳ ಪರ ಇಲ್ಲ. ರಾಷ್ಟ್ರದ ಭದ್ರತೆ ಬಗ್ಗೆ ಪ್ರತೀ ಭಾರತೀಯನೂ ಗಮನ ಹರಿಸುತ್ತಾನೆ. ಕಾಂಗ್ರೆಸ್‌ ಕೂಡ ಅದನ್ನು ಮಾಡುತ್ತದೆ. ಬಿಜೆಪಿ ತನ್ನ ಅಕ್ರಮಗಳನ್ನು ಸಕ್ರಮ ಮಾಡಿಕೊಳ್ಳುವುದಕ್ಕೆ ಈ ರೀತಿ ಹೇಳಿಕೆಗಳನ್ನು ತಿರುಚುತ್ತಿದೆ. ಕೇಂದ್ರದಲ್ಲಿ ಅಧಿಕಾರವನ್ನು ದುರುಪಯೋಗ ಪಡಿಸುತ್ತಿದೆ ಎಂದು ಸಂಸದ ಡಿ.ಕೆ. ಸುರೇಶ್‌ ಬಿಜೆಪಿ ವಿರುದ್ಧ ವಾಗ್ಧಾœಳಿ ನಡೆಸಿದರು.

Advertisement

ರವಿವಾರ ಕಾರ್ಕಳಕ್ಕೆ ಆಗಮಿಸಿದ್ದ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಬಿಜೆಪಿಯವರು ಮೊದಲಿನಿಂದಲೂ ಹೇಳಿಕೆಗಳನ್ನು ತಿರುಚುವುದರಲ್ಲಿ ನಿಸ್ಸಿಮರು. ಪಿಎಸ್‌ಐ ಹಗರಣ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದೆ. ಬೆಲೆ ಏರಿಕೆ ತಡೆಯಲು ಇವರಿಗೆ ಸಾಧ್ಯವಾಗಿಲ್ಲ. ಶೇ. 40 ಕಮಿಷನ್‌ ಸರಕಾರ ಅಂತ ದೇಶ ವಿದೇಶದಲ್ಲಿ ರಾಜ್ಯ ಕುಖ್ಯಾತಿ ಪಡೆದಿದೆ. ತಮ್ಮ ವೈಪಲ್ಯ ಮುಚ್ಚಿಹಾಕಲು ಸುಳ್ಳು ಸೃಷ್ಟಿಸಲಾಗುತ್ತಿದೆ ಎಂದರು.

ಅಧಿವೇಶನದಲ್ಲಿ ಧ್ವನಿ
ರಾಜ್ಯ ಸರಕಾರದ ವೈಫ‌ಲ್ಯ, ಸಾಲು ಭ್ರಷ್ಟಾಚಾರಗಳನ್ನು ಬೆಳಗಾವಿ ಅಧಿವೇಶನದಲ್ಲಿ ಕಾಂಗ್ರೆಸ್‌ನ ಶಾಸಕರು ಬಿಚ್ಚಿಡಲಿದ್ದಾರೆ. ಸಿಎಲ್‌ಪಿ ನಾಯಕರು, ಶಾಸಕರು ಸಿದ್ಧತೆ ಮಾಡಿಕೊಂಡಿದ್ದು, ಅಕ್ರಮಗಳ ಬಗ್ಗೆ ಧ್ವನಿ ಎತ್ತುತ್ತಾರೆ ಎಂದು ತಿಳಿಸಿದರು.

ಬದಲಾವಣೆಯತ್ತ ಮನ
ಕಾರ್ಕಳ ಕ್ಷೇತ್ರದಲ್ಲಿ ಸುನಿಲ್‌ ವಿರುದ್ಧ ಮುತಾಲಿಕ್‌ ಸ್ಪರ್ಧೆ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ. ಇಲ್ಲಿ ನಮ್ಮ ಪಕ್ಷ ಸದೃಢವಾಗಿದೆ. ಎಲ್ಲ ಮುಖಂಡರು, ಕಾರ್ಯಕರ್ತರು ಹಾಗೂ ಯುವಕರ ಪಡೆಯನ್ನು ಕಟ್ಟಿಕೊಂಡು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಲಿಯವರು ಕೆಲಸ ಮಾಡುತ್ತಿದ್ದಾರೆ. ಕಾರ್ಕಳದ ಜನತೆ ಬದಲಾವಣೆ ಬಯಸಿದ್ದಾರೆ ಎಂದರು.
ಸುರೇಂದ್ರ ಶೆಟ್ಟಿ, ಕೃಷ್ಣ ಶೆಟ್ಟಿ ನೀರೆ, ಶುಭದ ರಾವ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next