ಇದುವರೆಗೆ ದ.ಕ. ಜಿಲ್ಲಾ ಎಸ್ಪಿ ಆಗಿದ್ದ ಭೂಷಣ್ ಗುಲಾಬ್ರಾವ್ ಬೊರಸೆ ಅವರು ಅಧಿಕಾರ ಹಸ್ತಾಂತರಿಸಿದರು.
ಮಂಡ್ಯ ಜಿಲ್ಲಾ ಎಸ್ಪಿ ಆಗಿದ್ದ ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ ಅವರನ್ನು ಬುಧವಾರ ದ.ಕ. ಜಿಲ್ಲಾ ಎಸ್ಪಿ ಆಗಿ ನೇಮಿಸಿ ಸರಕಾರ ಆದೇಶ ಹೊರಡಿಸಿತ್ತು. ಇದುವರೆಗೆ ದ.ಕ. ಜಿಲ್ಲಾ ಎಸ್ಪಿ ಆಗಿದ್ದ ಭೂಷಣ್ ಗುಲಾಬ್ರಾವ್ ಬೊರಸೆ ಅವರನ್ನು ಬೆಂಗಳೂರಿಗೆ ವರ್ಗಾಯಿಸಲಾಗಿತ್ತು. ಅಧಿಕಾರ ಸ್ವೀಕರಿಸಿದ ಕೂಡಲೇ ಇಬ್ಬರೂ ಅಧಿಕಾರಿಗಳು ಜಿಲ್ಲೆಗೆ ಆಗಮಿಸಿದ ಎಡಿಜಿಪಿ ಆಲೋಕ್ ಮೋಹನ್ ಅವರನ್ನು ಸ್ವಾಗತಿಸಲು ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿದರು. ಅಲ್ಲಿಂದ ಬಂಟ್ವಾಳಕ್ಕೆ ನಿರ್ಗಮಿಸಿದರು.
Advertisement