Advertisement

ಒಂದೇ ವಿಮಾನದಲ್ಲಿ ಡಿ.ಕೆ.ಶಿವಕುಮಾರಶ್ರೀರಾಮುಲು ಬೆಂಗಳೂರಿಗೆ ಪ್ರಯಾಣ

11:32 AM May 12, 2019 | pallavi |

ಹುಬ್ಬಳ್ಳಿ: ಚುನಾವಣಾ ಕಣದಲ್ಲಿ ಮಾತಿನ ಕುಸ್ತಿ ಹಿಡಿಯುವ ಸಚಿವ ಡಿ.ಕೆ. ಶಿವಕುಮಾರ ಹಾಗೂ ಶಾಸಕ ಶ್ರೀರಾಮುಲು ಶನಿವಾರ ನಗರದ ವಿಮಾನ ನಿಲ್ದಾಣದ ವಿಐಪಿ ಲಾಂಜ್‌ನಲ್ಲಿ ಆಕಸ್ಮಿಕವಾಗಿ ಮುಖಾಮುಖೀಯಾಗಿ, ಅಕ್ಕಪಕ್ಕ ಕುಳಿತು ಉಭಯ ಕುಶಲೋಪರಿ ವಿಚಾರಿಸಿದರು.

Advertisement

ಕುಂದಗೋಳ ವಿಧಾನಸಭಾ ಉಪ ಚುನಾವಣೆ ನಿಮಿತ್ತ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿರುವ ಇಬ್ಬರು ನಾಯಕರು, ಕಳೆದ ಎರಡ್ಮೂರು ದಿನಗಳಿಂದ ಪರಸ್ಪರ ಬದ್ಧ ವೈರಿಗಳಂತೆ ಮಾತಿನ ಭರಾಟೆ ನಡೆಸಿದ್ದರು. ಆದರೆ ಶನಿವಾರ ನಿಲ್ದಾಣದಲ್ಲಿ ಆಕಸ್ಮಿಕ ಭೇಟಿಯಾಗುವ ಮೂಲಕ ಇನ್ನುಳಿದವರು ಮೂಕವಿಸ್ಮಿತರಾಗುವಂತೆ ಮಾಡಿದರು. ಬಳಿಕ ಉಭಯ ನಾಯಕರು ಒಂದೇ ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next