Advertisement

ಮಾಜಿ ಸಿಎಂ ಎಸ್ ಎಂ ಕೃಷ್ಣರನ್ನು ಭೇಟಿಯಾದ ಡಿಕೆಶಿ : 2 ಗಂಟೆ ಕಾಲ ಚರ್ಚೆ

09:13 AM Jan 16, 2020 | Suhan S |

ಬೆಂಗಳೂರು : ಇವತ್ತು ಸಂಕ್ರಾಂತಿ ಹಿನ್ನಲೆ ಎಸ್ಎಂಕೆ ಭೇಟಿ ಮಾಡಿದ್ದೇನೆ. ಇದು ವೈಯಕ್ತಿಕ ಭೇಟಿಯೇ ಹೊರತು ರಾಜಕೀಯ ಅಲ್ಲ. ನನ್ನ ಅವರ ಸಂಬಂಧದ ಬಗ್ಗೆ ನಿಮಗೂ ಕೂಡ ಗೊತ್ತು. ರಾಜಕೀಯ ಮಾಡೋರು ಮಾಡಲಿ ಬಿಡಿ ಎಂದರು.

Advertisement

ಇದೇ ವೇಳೆ ಹರಿಹರ ಜಾತ್ರೆಯಲ್ಲಿ ಯಡಿಯೂರಪ್ಪ ನೀಡಿದ ಹೇಳಿಕೆಯ ಕುರಿತು ಮಾತಾನಾಡಿದ ಅವರು ನಾನೂ ಕೂಡ ಹರಿಹರಕ್ಕೆ ಹೋಗುತ್ತಿದ್ದೇನೆ. ಯಡಿಯೂರಪ್ಪ ಯಾರು ಯಾರಿಗೆ ಏನು ಮಾತು ಕೊಟ್ಟಿದ್ದಾರೋ ಗೊತ್ತಿಲ್ಲ ಅವರು ಮಾತಾಡುವಾಗ ಇಂಟರ್ನಲ್ ಏನೇನು ಇತ್ತೋ ಗೊತ್ತಿಲ್ಲ ಓಟು ಹಾಕಿಸಿಕೊಳ್ಳುವಾಗ ಏನು ಮಾತು ಕೊಟ್ಟಿದ್ದಾರೆ, ಮಧ್ಯರಾತ್ರಿ ಏನು ಮಾತು ಕೊಟ್ಟಿರ್ತಾರೆ, ಸಂಜೆ ಏನು ಮಾತು ಕೊಟ್ಟಿರ್ತಾರೆ ಗೊತ್ತಿಲ್ಲ ನಾನು ಅದರಲ್ಲಿ ಮಧ್ಯಸ್ಥಿಕೆ  ಆಗೋದು ಒಳ್ಳೆಯದಲ್ಲ ಎಂದರು.

ಮುಂದುವರೆಸಿ ಮಾತಾನಾಡಿದ ಅವರು ದಿನೇಶ್ ಗುಂಡೂರಾವ್ ಏನೇ ಇದ್ರೂ ಹೈಕಮಾಂಡ್ ಜೊತೆ ಮಾತನಾಡಲಿ ಅವರೂ ಕೂಡ ಒಳ್ಖೆ ಕೆಲಸ ಮಾಡಿದ್ದಾರೆ, ಒಳ್ಳೆದಾಗಲಿ ಎಂದರು.

ಸದಾಶಿವನಗರದ ಎಸ್ ಎಂಕೆ ನಿವಾಸದಲ್ಲಿ ಮಾಜಿ ಸಿಎಂ ಎಸ್ ಎಂ ಕೃಷ್ಣ ರನ್ನು ಭೇಟಿಯಾಗಿದ್ದ  ಡಿಕೆಶಿ  ಸಂಕ್ರಾಂತಿ ಶುಭ ಕೋರುವ ನೆಪದಲ್ಲಿ ಎಸ್ಎಂಕೆ ಭೇಟಿ ಸುಮಾರು 2 ಗಂಟೆಗಳ ಕಾಲ ಎಸ್ ಎಂಕೆ ಜೊತೆ ಚರ್ಚಿಸಿದ ಡಿಕೆಶಿ ಕೆಪಿಸಿಸಿ ಆಯ್ಕೆ ಕುರಿತು ಕಾಂಗ್ರೆಸ್ ನಡೆಯುತ್ತಿರುವ ಬೆಳವಣಿಗೆಗಳ ನಡುವೆ ಡಿಕೆಶಿ ಎಸ್ ಎಂಕೆ ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next