Advertisement

ರೇಷ್ಮೆ ಜತೆ ದೀಪಾವಳಿ..! ಉದಯವಾಣಿ ಓದುಗರಿಗೆ ಸ್ಪರ್ಧೆ

03:00 PM Oct 17, 2017 | |

ಮಣಿಪಾಲ: ರೇಷ್ಮೆ ಸೀರೆ-ಉಡುಗೆಗಳನ್ನು ಈ ದೀಪಾವಳಿಯಲ್ಲಿ ತೊಟ್ಟು ಸಂಭ್ರಮಿಸುವುದಷ್ಟೇ ಅಲ್ಲ ; ಅವುಗಳ ಉತ್ತಮ ಫೋಟೋಗಳನ್ನು ಕಳಿಸಿ ಬಹುಮಾನವನ್ನೂ ಗೆಲ್ಲಲು ಅವಕಾಶವಿದೆ. 

Advertisement

ರೇಷ್ಮೆ ಎಷ್ಟು ಮೋಹಕವೋ ಅಷ್ಟೇ ಪವಿತ್ರ. ಸುಂದರ ರೇಷ್ಮೆಯ ಉಡುಗೆಗಳೊಂದಿಗೆ ಹಬ್ಬಗಳನ್ನು ಆಚರಣೆಯ ಸಂಭ್ರಮವೇ ಬೇರೆ. ಹಾಗಾಗಿಯೇ ಕರಾವಳಿ ಕರ್ನಾಟಕದ ಜನಮನದ ಜೀವನಾಡಿ ಉದಯವಾಣಿ, ಮಣಿಪಾಲ ಆವೃತ್ತಿಯಲ್ಲಿ ತನ್ನ ಓದುಗರು ರೇಷ್ಮೆಯೊಂದಿಗೆ ಸಂಭ್ರಮಿಸುವ ಸಂತಸದ ಕ್ಷಣಗಳಿಗೆ ರೇಷ್ಮೆ ಜತೆ ದೀಪಾವಳಿ ಸ್ಪರ್ಧೆಯನ್ನು ಮಹಿಳೆಯರಿಗಾಗಿ ಆಯೋಜಿಸಿದೆ. 

ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ಮಹಿಳೆಯರು ಇದರಲ್ಲಿ ಪಾಲ್ಗೊಳ್ಳಬಹುದು. ಸಾಂಪ್ರದಾಯಿಕ ರೇಷ್ಮೆಯ ಪ್ರತಿಷ್ಠಿತ ಸ್ಥಾನವನ್ನು ಮತ್ತಷ್ಟು ಔನ್ಯತ್ಯಕ್ಕೇರಿಸಲು ಹಾಗೂ ಆ ಮೂಲಕ ಮತ್ತೆ ಸಾಂಪ್ರದಾಯಿಕತೆಗೆ ಒತ್ತು ನೀಡುವುದು ಈ ಸ್ಪರ್ಧೆಯ ಉದ್ದೇಶ.

ಮಹಿಳೆಯರು ರೇಷ್ಮೆ ಸೀರೆಯೊಂದಿಗೆ ಆಚರಿಸುತ್ತಿರುವ ದೀಪಾವಳಿಯ ವಿಶಿಷ್ಟ ಫೋಟೋಗಳನ್ನು ನಮಗೆ ಕಳುಹಿಸಿಕೊಡಬೇಕು. ಅಮ್ಮ ಮಗಳು, ಅತ್ತೆ ಸೊಸೆ, ಅಕ್ಕ ತಂಗಿ, ಗೆಳತಿಯರು ಹೀಗೆ ಒಟ್ಟಾಗಿ ಆಚರಿಸುವ ಫೋಟೋಗಳನ್ನು ಕಳುಹಿಸಬಹುದು. 

ಉತ್ತಮ ರೆಸೊಲ್ಯೂಶನ್‌ ಹೊಂದಿರುವ, ಕಲಾತ್ಮಕವಾಗಿರುವ, ನೈಜತೆಯಿಂದ ಕೂಡಿರುವ ಫೋಟೋಗಳಿಗೆ ಹೆಚ್ಚಿನ ಪ್ರಾಶಸ್ತ್ಯತೆ. ಫೋಟೋಗಳನ್ನು ಕಳುಹಿಸಲು ಕೊನೆಯ ದಿನಾಂಕ: 23-10-2017. ವಿಜೇತ ಫೋಟೋಗಳನ್ನು 27-10-2017ರ ಉದಯವಾಣಿ ದಿನಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.  ಫೋಟೋಗಳನ್ನು ನಮ್ಮ ಇ-ಮೇಲ್‌ ವಿಳಾಸ sudina.spl@udayavani.com ಅಥವಾ ವಾಟ್ಸಪ್‌ ನಂಬರಿಗೆ 76187 74529 ಕಳುಹಿಸಿಕೊಡಿ.

Advertisement

ಉತ್ತಮ ಫೋಟೋಗಳಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು. ಈ ಸ್ಪರ್ಧೆಯ ಬಹುಮಾನಗಳನ್ನು ಮಂಗಳೂರಿನ ಪ್ರಖ್ಯಾತ ಜವಳಿ ಮಳಿಗೆ ಎಂ. ಸಂಜೀವ ಶೆಟ್ಟಿ ಸಿಲ್ಕ್ಸ್‌ ಆ್ಯಂಡ್‌ ಸಾರೀಸ್‌ ಇವರು ಪ್ರಾಯೋಜಿಸುತ್ತಿದ್ದು, ಪ್ರಥಮ ಬಹುಮಾನ 15 ಸಾವಿರ ರೂ. ಬೆಲೆಯ ರೇಷ್ಮೆ ಸೀರೆ, ದ್ವಿತೀಯ ಬಹುಮಾನ 10 ಸಾವಿರ ರೂ. ಮೌಲ್ಯದ ರೇಷ್ಮೆ ಸೀರೆ, ತೃತೀಯ ಬಹುಮಾನ 5 ಸಾವಿರ ರೂ. ಮೌಲ್ಯದ ರೇಷ್ಮೆ ಸೀರೆ ಹಾಗೂ 5 ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು.

ದೀಪಾವಳಿಯ ಸಂಭ್ರಮವನ್ನು ಮತ್ತಷ್ಟು ಸಂಭ್ರಮಿಸಲು ಇದೊಂದು ಸದಾವಕಾಶ. ಬನ್ನಿ ದೀಪಾವಳಿಯನ್ನು ರೇಷ್ಮೆಯೊಂದಿಗೆ ಸಂಭ್ರಮಿಸಿ..

Advertisement

Udayavani is now on Telegram. Click here to join our channel and stay updated with the latest news.

Next