Advertisement
ಗಂಡನಿಗೆ ವಿಚ್ಛೇದನ ನೀಡಿ ಪ್ರಿಯಕರನೊಂದಿಗೆ ಮದುವೆಯಾದ ನಗರದ ಆಶ್ವನಿ ಬಡಾವಣೆಯಲ್ಲಿ ವಾಸವಾಗಿರುವ ಮಹಿಳೆ ರಚನಾ ವೃತ್ತಿಯಲ್ಲಿ ವಕೀಲೆ. ಹಾಗೂ ರಾಜ್ಯ ರೈತ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆಯಾಗಿದ್ದಾರೆ. ಅವರು ಕಳೆದ ಹದಿನೈದು ವರ್ಷಗಳ ಹಿಂದೇ ಪೆದ್ದೂರು ಗ್ರಾಮದ ವಕೀಲ ಈಶ್ವರಗೌಡರನ್ನು ಮದುವೆಯಾಗಿ ಒಂದು ಹೆಣ್ಣು ಹಾಗೂ ಒಂದು ಗಂಡು ಮಗುವಿನ ತಾಯಿಯಾಗಿದ್ದಾರೆ. ಕೆಲ ದಿನಗಳ ನಂತರ ಇವರ ಸಂಸಾರದಲ್ಲಿ ಅನ್ಯೋನ್ಯತೆ ಇಲ್ಲದ ಕಾರಣ ರಚನಾ 2016ರ ಮಾರ್ಚ್ 3 ರಂದು ನ್ಯಾಯಾಲಯದ ಮುಖಾಂತರ ವಿಚ್ಛೇದನ ಪಡೆದಿದ್ದರು.
Related Articles
Advertisement
ತಾನು ತನ್ನ ಮುಂದಿನ ಜೀವನಕ್ಕೆ ಅನುಕೂಲವಾಗುವ ಹಾಗೂ ತನ್ನನ್ನು ಇಷ್ಟಪಡುವವರನ್ನು ಮದುವೆಯಾಗ ಬೇಕೆಂಬ ಉದ್ದೇಶದಿಂದ ಗಂಡನಿಗೆ ವಿಚ್ಛೇದನ ನೀಡಿದ್ದೆ. ತಮ್ಮ ಶಾಲೆಯಲ್ಲಿಯೇ ವಾಹನ ಚಾಲಕನಾಗಿರುವ ಮಂಜುನಾಥ್ ತನ್ನನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದ ಕಾರಣ ಜಾತಿ, ಮತ ಯಾವು ದನ್ನೂ ಲೆಕ್ಕಿಸದೇ ಅವರನ್ನು ಮೊದಲ ಪತಿ ಈಶ್ವರಗೌಡರ ಸಮ್ಮುಖದಲ್ಲಿಯೇ ಮದುವೆ ಯಾಗಿದ್ದೇನೆ ಎಂದು ರಚನಾ ಸ್ಪಷ್ಟಪಡಿಸಿದ್ದಾರೆ.