Advertisement

Kottigehara-ಬಾಳೂರು ಹೆದ್ದಾರಿಯಲ್ಲೇ ಕಂದಕ: ಹೈರಾಣಾದ ಸವಾರರು

07:20 PM Aug 17, 2023 | Team Udayavani |

ಕೊಟ್ಟಿಗೆಹಾರ: ಬಾಳೂರಿನಿಂದ ಕೊಟ್ಟಿಗೆಹಾರಕ್ಕೆ ಬರುವ ರಾಜ್ಯ ಹೆದ್ದಾರಿಯ ರಸ್ತೆಯಲ್ಲಿ ಬೃಹತ್ ಕಂದಕ ನಿರ್ಮಾಣವಾಗಿದ್ದು ವಾಹನ ಸವಾರರು ಪರದಾಡುವಂತಾಗಿದೆ.ಪ್ರತಿ ವರ್ಷವೂ ಮಹಾಮನೆ ಎಸ್ಟೇಟ್ ಸಮೀಪದ ರಸ್ತೆಯಲ್ಲಿ ಬೃಹತ್ ಕಂದಕ ನಿರ್ಮಾಣವಾಗುತ್ತಿದ್ದು, ದ್ವಿಚಕ್ರ ಸವಾರರು ಸೇರಿದಂತೆ ಘನವಾಹನ ಸವಾರರು ವಾಹನ ಚಲಾಯಿಸಲು ಅಪಾಯ ಎದುರಾಗುತ್ತಿದೆ.

Advertisement

ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿ ಬರುವುದರಿಂದ ಈ ಜಾಗದಲ್ಲಿ ಹಿಂದೆ ಮೋರಿ ಅಥವಾ ಅಡಿಯಲ್ಲಿ ಜಲ ಕೀಳುವ ಸ್ಥಳವಾಗಿದ್ದು ಹೊಸ ಡಾಂಬರೀಕರಣ ಮಾಡುವಾಗ ಈ ಕಂದಕ ಹಾಗೆಯೇ ಮುಚ್ಚಿ ಹೋಗಿದ್ದು ಮಳೆಗಾಲದ ಸಮಯವಾದ್ದರಿಂದ ಮತ್ತೆ ತೆರೆದುಕೊಂಡು ಅಪಾಯದ ತಾಣವಾಗುತ್ತಿದೆ. ಈ ರಸ್ತೆಯ ಆಸುಪಾಸಿನ ರಸ್ತೆ ಬದಿಯಲ್ಲಿ ಗಿಡಗಂಟಿ ಬೆಳೆದಿದ್ದು ಮುಂದೆ ಬರುವ ವಾಹನಗಳಿಗೆ ರಸ್ತೆಯು ಕಾಣದೇ ಅಪಾಯದ ಸ್ಥಿತಿಯೂ ಇದೆ. ವಾಹನಗಳು ವೇಗವಾಗಿ ಬಂದಾಗ ಸೈಡ್ ಕೊಡಲು ಹೋಗಿ ಕಂದಕಕ್ಕೆ ಬಿದ್ದು ಅವಘಡ ಸಂಭವಿಸುವ ಮೊದಲು ಸಂಬಂಧಿಸಿದ ಲೋಕೋಪಯೋಗಿ ಅಧಿಕಾರಿಗಳು ರಾಜ್ಯ ಹೆದ್ದಾರಿಯ ಕೊಟ್ಟಿಗೆಹಾರ ಬಾಳೂರು ನಡುವಿನ ರಸ್ತೆಯ ಕಂದಕ ಮುಚ್ಚಬೇಕೆಂದು ಆಗ್ರಹಿಸಿದ್ದಾರೆ.

‘ಮಹಾಮನೆ ಸಮೀಪದ ರಾಜ್ಯ ಹೆದ್ದಾರಿಗೆ ಅಪಾಯದ ತಡೆಪಟ್ಟಿಯೂ (ಕ್ರಾಸ್ ಬೇರರ್) ಇಲ್ಲದೇ ಅಪಘಾತಗಳು ಸಂಭವಿಸುತ್ತಿದೆ.ಅಧಿಕಾರಿಗಳು ರಸ್ತೆ ಕಂದಕ ಮುಚ್ಚಿ ನೆರವಾಗಬೇಕು’ ಎಂದು ಯುವ ಜನತಾದಳ ಮುಖಂಡ ಆದರ್ಶ್ ಬಾಳೂರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next