Advertisement

ಕಾಡುವ ನೆಗಡಿಗೆ

09:58 AM Mar 12, 2020 | mahesh |

“ನಿಮಗೆ ನೆಗಡಿಯಾಗಿದೆಯೇ?’
“ಹೌದಪ್ಪಾ, ಹೌದು!’.
ಟಿ.ವಿಯಲ್ಲಿ ನಟ ಶಿವಾಜಿ ಪ್ರಭು ಮೂಗು, ಹಣೆ, ತಲೆ ಹಿಂಡುತ್ತಾ ಹೇಳುವ ಈ ಜಾಹೀರಾತು ಒಂದೆಡೆ ನಗೆ ತರಿಸಿದರೆ, ಇನ್ನೊಂದೆಡೆ ಅನುಕಂಪ ಮೂಡಿಸುತ್ತದೆ. ಯಾಕಂದ್ರೆ, ನೆಗಡಿಯ ಗಡಿಬಿಡಿ, ಸಿಡಿಸಿಡಿ ಅನುಭವಿಸುವುದು ಕಷ್ಟವೇ. ಶೀತವಾದಾಗ, ಅಡುಗೆಮನೆಯಲ್ಲಿ ಇರುವ ಸಾಮಗ್ರಿಗಳನ್ನೇ ಔಷಧವಾಗಿ ಬಳಸಬಹುದು.

Advertisement

– ಬಿಸಿ ಹಾಲಿಗೆ ಕಲ್ಲು ಸಕ್ಕರೆ ಹಾಗೂ ಕಾಳು ಮೆಣಸಿನ ಪುಡಿ ಬೆರೆಸಿ ಕುಡಿಯಿರಿ.

– ಒಂದು ಹಿಡಿ ತುಳಸಿ ಎಲೆ, ಅರ್ಧ ಚಮಚ ಕಾಳು ಮೆಣಸಿನ ಪುಡಿಯನ್ನು ಒಂದು ಲೋಟ ನೀರಿನಲ್ಲಿ ಚೆನ್ನಾಗಿ ಕುದಿಸಿ, ದಿನಕ್ಕೆ 3 ಬಾರಿ ಜೇನುತುಪ್ಪ ಬೆರೆಸಿ ಸೇವಿಸಿ.

-ಮೂಗಿನ ಸುತ್ತಲೂ ಕೊಂಚ ಸಾಸಿವೆ ಎಣ್ಣೆ ಹಚ್ಚಿದರೆ ನೆಗಡಿ ಮಾಯವಾಗುತ್ತದೆಂಬ ನಂಬಿಕೆಯಿದೆ.

-ಬಿಸಿ ಬಿಸಿ ಟೀಗೆ ಲಿಂಬೆ ಹಣ್ಣಿನ ರಸ ಬೆರೆಸಿ ಕುಡಿಯಿರಿ.

Advertisement

– 50 ಗ್ರಾಂ ಹುರುಳಿ, 10 ಗ್ರಾಂ ನೆಲ್ಲಿಹೋಳು, 3 ಗ್ರಾಂ ಹಿಪ್ಪಲಿಯನ್ನು ಕುಟ್ಟಿ ಕಷಾಯ ಮಾಡಿ, ಸೋಸಿ ಕುಡಿಯಬೇಕು.

-ಬೆಳ್ಳುಳ್ಳಿ ಮತ್ತು ಬೆಲ್ಲವನ್ನು ಸಮ ಪ್ರಮಾಣದಲ್ಲಿ ಕುಟ್ಟಿ, ರಾತ್ರಿ ಮಲಗುವ ಮುನ್ನ ತಿನ್ನಿ.

-ಒಂದಷ್ಟು ಸಬ್ಬಸಿಗೆ ಸೊಪ್ಪಿಗೆ ಅದರ ಎರಡರಷ್ಟು ಜೇಷ್ಠ ಮಧು ಬೆರೆಸಿ ಕುಟ್ಟಿ ಚೂರ್ಣ ಮಾಡಿಕೊಳ್ಳಿ. ಆ ಚೂರ್ಣಕ್ಕೆ ಒಂದಕ್ಕೆ ಎರಡರಂತೆ ಸಕ್ಕರೆ ಬೆರೆಸಿ ದಿನಕ್ಕೆ 3 ಬಾರಿ ಸೇವಿಸಿ.

– ಅಮೃತಬಳ್ಳಿ ಸೊಪ್ಪಿಗೆ ಉಪ್ಪು ಬೆರೆಸಿ ಜಗಿದು ಅದರ ರಸ ನುಂಗಬೇಕು.

-ಅಳಲೆಕಾಯಿ, ಶುಂಠಿ ಮತ್ತು ಕಾಳು ಮೆಣಸನ್ನು ಹುರಿದು ಚೂರ್ಣ ಮಾಡಿ, ಸಮಾಂಶ ಬೆಲ್ಲದೊಂದಿಗೆ ಎಳ್ಳೆಣ್ಣೆ ಸೇರಿಸಿ ಕಲಸಿ ಕೊಂಚ ಕೊಂಚ ಸೇವಿಸಿ.

ಕೆ. ಶ್ರೀನಿವಾಸರಾವ್‌

Advertisement

Udayavani is now on Telegram. Click here to join our channel and stay updated with the latest news.

Next