Advertisement

ಶಾಸಕರು-ಸಚಿವರ ಗೈರು, ಸಾಹಿತ್ಯಾಭಿಮಾನಿಗಳ ಕೊರತೆ

12:48 PM Feb 28, 2021 | Team Udayavani |

ಚಿಕ್ಕಬಳ್ಳಾಪುರ: ಹೇಳಿ ಕೇಳಿ ಚಿಕ್ಕಬಳ್ಳಾಪುರ ಜಿಲ್ಲೆ ರಾಜ್ಯದ ಗಡಿ ಜಿಲ್ಲೆ. ಇಲ್ಲಿ ಕನ್ನಡ ಭಾಷೆಗಿಂತಲೂಬೇರೆ ಭಾಷೆಗಳ ಪ್ರಭಾವ ಹೆಚ್ಚಾಗಿದೆಯೆಂಬ ದೂರು ಸಾಮಾನ್ಯ. ಇಂತಹ ಪ್ರದೇಶದಲ್ಲಿ ನಡೆದ 8ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌ ಸಹಿತ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳ ಶಾಸಕರು ಗೈರು ಹಾಜರಾದರು.

Advertisement

ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಜನರನ್ನು ಅಥವಾ ಕನ್ನಡ ಅಭಿಮಾನಿಗಳನ್ನು ಸೇರಿಸಬಾರದೆಂದುನಿರ್ಬಂಧ ಹೇರಿದ್ದರಿಂದ ಸಮ್ಮೇಳನದಲ್ಲಿ ಸರಳದ ನೆಪದಲ್ಲಿ ಸಂಪೂರ್ಣವಾಗಿ ಸರಳವಾಗಿ ನಡೆಯಿತು. ಜಿಲ್ಲೆಯಲ್ಲಿ ಕನ್ನಡ ಭಾಷೆಯ ಅಭಿವೃದ್ಧಿ ವಿಚಾರದಲ್ಲಿ ಸರ್ಕಾರದ ನಿಲುವುಮತ್ತು ಗಡಿ ಜಿಲ್ಲೆಯಲ್ಲಿ ಕನ್ನಡ ಭಾಷೆಯ ಅಭಿವೃದ್ಧಿ ವಿಷಯದಲ್ಲಿ ಏನು ಕಾರ್ಯಕ್ರಮರೂಪಿಸಲಾಗಿದೆ ಎಂಬುದು ತಿಳಿಸಲು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌ ಗೈರು ಹಾಜರಾಗಿದ್ದರು.

ಪ್ರಚಾರ ನಡೆಸಿಲ್ಲ: ಜಿಲ್ಲಾ ಉಸ್ತುವಾರಿ ಸಚಿವರ ಜೊತೆಗೆ ಜಿಲ್ಲೆಯ ಶಿಡ್ಲಘಟ್ಟ,ಬಾಗೇಪಲ್ಲಿ, ಗೌರಿ ಬಿದನೂರು, ಚಿಂತಾ ಮಣಿಕ್ಷೇತ್ರದ ಶಾಸಕರು ಹಾಗೂ ವಿವಿಧ ಪಕ್ಷಗಳ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಗೈರು ಹಾಜರಿ ಎದ್ದುಕಾಣು ತ್ತಿತ್ತು. ಜಿಲ್ಲಾ ಮಟ್ಟದಲ್ಲಿ ನಡೆದ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ವ್ಯಾಪಕ ವಾಗಿ ಪ್ರಚಾರ ನಡೆಸಿಲ್ಲವೆಂದು ದೂರು ಕೇಳಿಬಂದಿದೆ.

ಭಿನ್ನಮತ: ಜಿಲ್ಲೆಯಲ್ಲಿರುವ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಅದರಲ್ಲೂ ವಿಶೇಷವಾಗಿ ಕನ್ನಡ ಸಾಹಿತ್ಯ ಪರಿಷತ್‌ ಮುಖಂಡರು ಮತ್ತು ಸದಸ್ಯರನ್ನು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಕೈವಾರ ಶ್ರೀನಿವಾಸ್‌ ವಿಶ್ವಾಸಕ್ಕೆತೆಗೆದುಕೊಂಡಿಲ್ಲವೆಂಬ ಗುರುತ್ತರ ಆರೋಪ  ಕೇಳಿಬಂದಿದೆ. ಒಟ್ಟಾರೆ ಸಮ್ಮೇಳನದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಮತ್ತು ಸದಸ್ಯರ ನಡುವಿನ ಭಿನ್ನಮತ ಸ್ಫೋಟಗೊಂಡಿದೆ.

ಮಾಹಿತಿ, ಆಮಂತ್ರಣ ನೀಡಿದರೂ ಬಂದಿಲ್ಲ :

Advertisement

ಕೋವಿಡ್ ಸೋಂಕು ಕಾರಣ 500 ಮಂದಿಗೆ ಮಾತ್ರ ಸಮ್ಮೇಳನದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು. ಅದರ ಅನ್ವಯ ಕನ್ನಡಪರ ಹೋರಾಟಗಾರರು-ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಸಾಪ ಸದಸ್ಯರಿಗೆಮಾಹಿತಿ ನೀಡಲಾಗಿದೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ಆರೋಪ ನಿರಾಧಾರ. ಜಿಲ್ಲೆಯ ಶಾಸಕರಿಗೆ ಖುದ್ದಾಗಿ ಭೇಟಿ ನೀಡಿ ಆಮಂತ್ರಣ ನೀಡಿದ್ದೇನೆ. ಅವರು ಯಾಕೆ ಬಂದಿಲ್ಲ ಎಂಬುದು ಗೊತ್ತಿಲ್ಲ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಕೈವಾರ ಶ್ರಿನಿವಾಸ್‌ ಸ್ಪಷ್ಟಪಡಿಸಿದರು.

ಭಾಷಾಭಿಮಾನಿಗಳ ಕೊರತೆ :

ಸಮ್ಮೇಳನದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸಾಹಿತ್ಯಾಭಿಮಾನಿಗಳು ಬಂದಿಲ್ಲ. ಕನ್ನಡಪರ ಸಂಘಟನೆಗಳ ಸದಸ್ಯರು ಸಹ ಕಾಣಿಸಲಿಲ್ಲ. ಕೆಲವರು ಒಲ್ಲದ ಮನಸ್ಸಿನಿಂದ ಸಮ್ಮೇಳನಕ್ಕೆ ಬಂದು ಕಾರ್ಯಕ್ರಮ ನೋಡಿ ಇದು ಜಿಲ್ಲಾ ಸಮ್ಮೇಳನವೋ? ಅಥವಾ ತಾಲೂಕು ಸಮ್ಮೇಳನವೋ? ಎಂದು ಬೇಸರ ವ್ಯಕ್ತಪಡಿಸಿದರು. ಸಮ್ಮೇಳನದ ಅಂಗವಾಗಿ ಪುಸ್ತಕಗಳ ಮಳಿಗೆಗಳನ್ನು ಹಾಕಿದರೂ ಸಹ ಸಮ್ಮೇಳನದಲ್ಲಿ ಸಾಹಿತ್ಯ ಅಭಿಮಾನಿಗಳ ಕೊರತೆಯಿಂದ ಮಳಿಗೆಯಲ್ಲಿ ವ್ಯಾಪಾರ ವಹಿವಾಟು ಸಹ ಕುಂಠಿತಗೊಂಡಿತ್ತು

Advertisement

Udayavani is now on Telegram. Click here to join our channel and stay updated with the latest news.

Next