Advertisement

ಜಿಲ್ಲಾ ಕೇಂದ್ರ: ಬಸ್‌ ಸಂಚಾರಕ್ಕೆ ಅವಕಾಶ

06:20 AM May 27, 2020 | Lakshmi GovindaRaj |

ಚಾಮರಾಜನಗರ: ಸಾರ್ವಜನಿಕರ ಬೇಡಿಕೆಯಂತೆ ಜಿಲ್ಲಾ ಕೇಂದ್ರದಿಂದ ತಾಲೂಕು ಕೇಂದ್ರಗಳಿಗೆ ಪ್ರಥಮ ಹಂತದಲ್ಲಿ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಜಿಲ್ಲಾ ಕೇಂದ್ರದಿಂದ ಬೆಂಗಳೂರು, ಮೈಸೂರು, ಕೊಳ್ಳೇಗಾಲ, ಗುಂಡ್ಲುಪೇಟೆ,  ತಿ.ನರಸೀಪುರ, ನಂಜನಗೂಡು ಹಾಗೂ ಇತರೆ ಸ್ಥಳಗಳ ಕಡೆಗೆ ಪ್ರಯಾಣಿಕರ ಬೇಡಿಕೆಗನು ಗುಣವಾಗಿ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ.

Advertisement

ಸಂಸ್ಥೆಯ ಕೇಂದ್ರ ಕಚೇರಿಯ ನಿರ್ದೇಶನದಂತೆ ಬಸ್‌ಗಳು ಪಾಯಿಂಟ್‌ ಟು ಪಾಯಿಂಟ್‌ ಕಾರ್ಯಾಚರಣೆ ಮಾಡುತ್ತಿದ್ದು, ಸಾರ್ವಜನಿಕ  ಪ್ರಯಾಣಿಕರ ಅನುಕೂಲಕ್ಕಾಗಿ ಸಂಸ್ಥೆಯು ಬಸ್‌ ನಿಲ್ದಾಣಗಳು ಇಲ್ಲದ ಹೋಬಳಿ ಕೇಂದ್ರ ಗಳು ಹಾಗೂ  ಜಂಕ್ಷನ್‌ ಪಾಯಿಂಟ್‌ಗಳಾದ ಮೈಸೂರು, ಕೊಳ್ಳೇಗಾಲ, ಗುಂಡ್ಲುಪೇಟೆ,  ತಿ.ನರಸೀಪುರ, ಹುಲ್ಲಹಳ್ಳಿ, ನಂಜನಗೂಡು, ಬೇಗೂರು, ತೆರಕಣಾಂಬಿ, ಹನೂರು ಹಾಗೂ ಇತರೆ ಕೇಂದ್ರಗಳಲ್ಲಿ  ಸಂಸ್ಥೆಯ ಸಿಬ್ಬಂದಿಗಳೊಂದಿಗೆ ಥರ್ಮಲ್‌ ಸ್ಕ್ರೀನಿಂಗ್‌ ವ್ಯವಸ್ಥೆ ಮಾಡಿಸಿ ಪ್ರಯಾಣಿಸಲು ಅನುಕೂಲ ಕಲ್ಪಿಸಲಾಗಿದೆ.

ಅನುಸರಿಸಬೇಕಾದ ಕ್ರಮಗಳು: ಬಸ್‌ ನಿಲ್ದಾಣದ ಒಳಗೆ ಬರುವ ಪ್ರಯಾಣಿಕರನ್ನು ಒಂದೇ ದ್ವಾರದಲ್ಲಿ ಪ್ರವೇಶ, ನಿರ್ಗಮನಕ್ಕೆ ಬ್ಯಾರಿಕೇಡಿಂಗ್‌ ಮಾಡಲಾಗಿದೆ. ಪ್ರಯಾ ಣಿಕರಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ  ಸಹಯೋಗದೊಂದಿಗೆ ಥರ್ಮಲ್‌ ಸ್ಕ್ಯಾನಿಂಗ್‌ ಮಾಡಲಾಗುವುದು. ಶೀತ, ಕೆಮ್ಮು ಇತ್ಯಾದಿ ರೋಗ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಸಂಪೂರ್ಣ ವಿವರಗಳೊಂದಿಗೆ ಅರೋಗ್ಯಾಧಿಕಾರಿಗಳ ಗಮನಕ್ಕೆ ತರಲಾಗುವುದು.

ಅಗತ್ಯ ವಸ್ತು ಪೂರೈಕೆ: ಕರ್ತವ್ಯ ನಿರ್ವಹಿಸುವ ಚಾಲಕ, ನಿರ್ವಾಹಕರಿಗೆ ಮುಖಗವಸು, ಕೈಗವಸು ಮತ್ತು ಸ್ಯಾನಿಟೈಸರ್‌ ನೀಡಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಕಡ್ಡಾಯ ವಾಗಿ ಬಸ್‌ನಿಲ್ದಾಣದಲ್ಲಿ ಸ್ಯಾನಿಟೈಸರ್‌ ಬಳಸಬೇಕು. ನಿಲ್ದಾಣ  ವನ್ನು ಪ್ರತಿ 2ರಿಂದ 3 ಗಂಟೆಗಳಿ  ಗೊಮ್ಮೆ ಶುಚಿಗೊಳಿಸಲಾಗುತ್ತದೆ. ಸಾಮಾಜಿಕ ಅಂತರ ಕಾಯ್ದು ಕೊಳ್ಳುವ ಸಲುವಾಗಿ ಆಸನಗಳ ಸಾಮರ್ಥಯವನ್ನು ಶೇಕಡ 50 ರಷ್ಟು ಇಳಿಸಲಾಗಿದೆ.

ಸಹಾಯವಾಣಿ: ಚಾಮರಾಜನಗರ ವಿಭಾಗದಿಂದ ಪ್ರಯಾಣಿಕರಿಗೆ ಸಾರಿಗೆ ಸೌಲಭ್ಯ, ಇತರೆ ಉಪಯೋಗ ಕ್ಕಾಗಿ ಜಿಲ್ಲಾ ವ್ಯಾಪ್ತಿಯಲ್ಲಿನ ಸಹಾಯವಾಣಿ ಸಂಖ್ಯೆ, ಚಾಮರಾಜ ನಗರ-7022029967, ಗುಂಡ್ಲುಪೇಟೆ- 70220  29 968,   ಕೊಳ್ಳೇಗಾಲ- 7022029973, ಹನೂರು-  9606081239, ನಂಜನಗೂಡು-99459 81847 ಹಾಗೂ ಟಿ.ನರಸೀಪುರ-9606081240 ಅನ್ನು ಸಂಪರ್ಕಿಸ ಬಹುದಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next