Advertisement

ಬಡವರಿಗೆ ದಿನಸಿ ಪದಾರ್ಥ ವಿತರಣೆ

06:04 PM Apr 10, 2020 | Suhan S |

ಮೈಸೂರು: ಲಾಕ್‌ಡೌನ್‌ ಹಿನ್ನಲೆಯಲ್ಲಿ ಪಾಲಿಕೆ ಸದಸ್ಯ ಮ.ವಿ.ರಾಮ್‌ ಪ್ರಸಾದ್‌ ಅವರು 55ನೇ ವಾರ್ಡ್‌ ವ್ಯಾಪ್ತಿಯಲ್ಲಿ ದಿನಸಿ ವಿತರಿಸಿದರು. ಮನೆ ಮನೆಗೆ ತೆರಳಿ ದಿನಸಿ ಪದಾರ್ಥಗಳನ್ನು ವಿತರಣೆ ಮಾಡಲಾಯಿತು.

Advertisement

ಮೇಯರ್‌ ತಸ್ನೀಂ ಮಾತನಾಡಿ, ಲಾಕ್‌ಡೌನ್‌ನಿಂದ ಬಡವರಿಗೆ ತೊಂದರೆಯಾಗದಂತೆ ನಗರ ಪಾಲಿಕೆ ಸದಸ್ಯ ಮ.ವಿ.ರಾಮಪ್ರಸಾದ್‌ ಅವರು ತಮ್ಮ ಸ್ವಂತ ಖರ್ಚಿನಿಂದ ದಿನಸಿ ಕಿಟ್‌ ವಿತರಿಸುತ್ತಿದ್ದಾರೆ. ಸಾಕಷ್ಟು ಸದಸ್ಯರು ಇದೇ ರೀತಿ ಮಾಡಿ ಕಿಟ್‌ ವಿತರಿಸುತ್ತಿದ್ದಾರೆ. ರಾಮ್‌ ಪ್ರಸಾದ್‌ ಅವರು ಅವರ ವಾರ್ಡಿನಲ್ಲಿ ವಿತರಿಸುತ್ತಿರುವುದು ಸಂತೋಷದಾಯಕ. ಸೋಂಕು ಹೆಚ್ಚುತ್ತಿದ್ದರು ಸಾರ್ವಜನಿಕರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಆದ್ದರಿಂದ ಸಾರ್ವಜನಿಕರು ಮನೆಯಲ್ಲಿ ಸುರಕ್ಷಿತವಾಗಿರುವಂತೆ ಸಲಹೆ ನೀಡಿದರು.

ಷಬ್‌ ಎ ಬರಾತ್‌ ಆಚರಣೆ ಹಿನ್ನೆಲೆಯಲ್ಲಿ ಮುಸ್ಲಿಮರು ಸ್ಮಶಾನಕ್ಕೆ ಹೋಗಿ ಪ್ರಾರ್ಥನೆ ಮಾಡಿ ಬರುತ್ತಾರೆ. ಆದರೆ, ಮನೆಯಲ್ಲೇ ಪ್ರಾರ್ಥನೆ ಮಾಡುವಂತೆ ಆದೇಶ ಬಂದಿದೆ. ಯಾರೂ ಮನೆಯಿಂದ ಹೊರಗೆ ಹೋಗಬೇಡಿ, ಮನೆಯಲ್ಲೇ ಇರಿ, ಸರ್ಕಾರದ ಆದೇಶ ಪಾಲಿಸಿ, ಮನೆಯಲ್ಲೇ ಪ್ರಾರ್ಥನೆ ಮಾಡಿ ಎಂದರು.

ನಗರ ಪಾಲಿಕೆ ಸದಸ್ಯ ಮ.ವಿ.ರಾಮಪ್ರಸಾದ್‌ ಮಾತನಾಡಿ, ನಮ್ಮ 55ನೇ ವಾರ್ಡ್‌ನ ಸಾವಿರ ಮನೆಗಳಿಗೆ ರೇಷನ್‌ ಕಿಟ್‌ ಕಳುಹಿಸಿದ್ದೇವೆ. ಬಡವರಿಗೆ ಅಕ್ಕಿ, ಕಾಳು, ರವೆ, ಸಕ್ಕರೆ, ಪ್ಯಾಕ್‌ ಮಾಡಿ ನೀಡುತ್ತಿದ್ದೇವೆ. ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು ಎಷ್ಟು ಮಾಡಿದರೂ ನಮ್ಮ ಕಣ್ಣಮುಂದೆ ಮತ್ತೆ ಲಕ್ಷಾಂತರ ಮಂದಿ ಕಾಣುತ್ತಾರೆ. ಮೈಸೂರಿನಲ್ಲಿ ಸಾಕಷ್ಟು ಉಳ್ಳವರಿದ್ದೇವೆ. ಅವರೆಲ್ಲರೂ ಸೇರಿ ಬೀದಿಯಲ್ಲಿರುವ ನಿರ್ಗತಿಕರಿಗೆ ಸಹಾಯ ಮಾಡೋಣ ಎಂದರು. ಕಾರ್ಯಕ್ರಮದಲ್ಲಿ ಮುಖಂಡರಾದ ಸಿ.ಸಂದೀಪ್‌, ಧರ್ಮೆಂದ್ರ, ವಿ.ಮಂಜುನಾಥ್‌, ಪುನೀತ್‌, ಚೇತನ್‌, ಶಿವು, ರೇಣು, ಸಂತೋಷ್‌, ಭಾಸ್ಕರ್‌, ಬಸವರಾಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next