Advertisement

ನಾಲ್ಕು ಸಾವಿರ ಕಾರ್ಮಿಕರಿಗೆ ಆಹಾರ ಸಾಮಗ್ರಿ ಕಿಟ್‌ ವಿತರಣೆ

08:25 AM Jun 01, 2020 | Suhan S |

ಧಾರವಾಡ: ಇಡೀ ದೇಶವೇ ಕೋವಿಡ್ ಮಹಾಮಾರಿಯಿಂದ ಬಳಲುತ್ತಿದ್ದು, ಅದರಲ್ಲೂ ಕಾರ್ಮಿಕರ ಜೀವನ ಬೀದಿಗೆ ಬಂದಿದೆ. ಹಾಗಾಗಿ ರಾಜ್ಯ ಸರಕಾರ ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ಸಹಾಯಾರ್ಥವಾಗಿ ಅವಶ್ಯಕ ಆಹಾರ ಸಾಮಗ್ರಿಗಳ ಕಿಟ್‌ ವಿತರಿಸುತ್ತಿದೆ ಎಂದು ಶಾಸಕ ಅಮೃತ ದೇಸಾಯಿ ಹೇಳಿದರು.

Advertisement

ಸವದತ್ತಿ ರಸ್ತೆಯಲ್ಲಿರುವ ಶ್ರೀ ಪದ್ಮಾವತಿ ಕಾಟನ್‌ ಇಂಡಸ್ಟ್ರಿಯಲ್ಲಿ ನೂರಾರು ಕಾರ್ಮಿಕರಿಗೆ ಕಿಟ್‌ ವಿತರಣೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ಧಾರವಾಡ ಗ್ರಾಮೀಣದಲ್ಲಿ 4000 ಕಿಟ್‌ಗಳನ್ನು ಹಂಚಲಾಗುತ್ತಿದ್ದು, ಈಗಾಗಲೇ ಗ್ರಾಮೀಣ ಭಾಗಗಳಲ್ಲಿ ಆಹಾರದ ಕಿಟ್‌ಗಳನ್ನು ಪೂರೈಸಲಾಗಿದೆ. ಕಾರ್ಮಿಕರ ಪರಿಸ್ಥಿತಿ ಅರಿತುಕೊಂಡು ಅವರಿಗೆ ಸಹಾಯ ಮಾಡಿದ ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಕಾರ್ಮಿಕ ಇಲಾಖೆ ಸಚಿವರಾದ ಶಿವರಾಮ ಹೆಬ್ಟಾರ್‌ ಅವರಿಗೆ ಕಾರ್ಮಿಕ ಸಮೂಹದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಪದ್ಮಾವತಿ ಕಾಟನ್‌ ಇಂಡಸ್ಟ್ರಿ ಮಾಲೀಕರಾದ ತವನಪ್ಪ ಅಷ್ಟಗಿ, ರೈತ ಮುಖಂಡರಾದ ಅಶೋಕ ದೇಸಾಯಿ, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ, ಶಶಿಮೌಳಿ ಕುಲಕರ್ಣಿ, ಗುರುನಾಥ ಗೌಡ, ಸಂಗನಗೌಡ ರಾಮನಗೌಡರ, ಬಿಜೆಪಿ-71ರ ಗ್ರಾಮೀಣ ಮಂಡಳ ಅಧ್ಯಕ್ಷರಾದ ರುದ್ರಪ್ಪ ಅರಿವಾಳ, ಬಿಜೆಪಿ-71ರ ನಗರ ಮಂಡಳ ಅಧ್ಯಕ್ಷರಾದ ಸುನಿಲ ಮೊರೆ, ಶಂಕರ ಶೆಳಕೆ, ಶಂಕರ ಮುಗದ, ಈರಣ್ಣ ಹಪ್ಪಳಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next