Advertisement

ಶಿರ್ವದಲ್ಲಿ ಆಟಿ ಅಮಾವಾಸ್ಯೆ ಕಷಾಯ ವಿತರಣೆ                       

08:08 AM Aug 08, 2021 | Team Udayavani |

ಉಡುಪಿ : ಇಂದು ಕರಾವಳಿ ಭಾಗದಲ್ಲಿ ಆಟಿ ಅಮಾವಾಸ್ಯೆಯನ್ನು ಆಚರಣೆ ಮಾಡಲಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ಜಿಲ್ಲೆಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿರ್ವದ ಸಮಾಜ ಸೇವಕ ಅ‌ನಂತ್ರಾಯ ಶೆಣೈ ಅವರು ಹಾಲೆ ಮರದ ಕಷಾಯ ವಿತರಿಸಿದರು.

Advertisement

ಶಿರ್ವ  ಪತಂಜಲಿ ಯೋಗ ಸಮಿತಿಯ ಕಚೇರಿ ಯಲ್ಲಿ ಆಟಿ ಅಮಾವಾಸ್ಯೆ ಯಂದು ಕೋವಿಡ್ ಸುರಕ್ಷಾ ನಿಯಮ ಪಾಲನೆಯೊಂದಿಗೆ ಹಾಲೆ ಮರದ ಕಷಾಯ ವಿತರಿಸಲಾಯಿತು.

ಕಷಾಯ ವಿತರಣೆ ವೇಳೆ ಸ್ಯಾನಿಟೈಸರ್ ಬಳಸಿಕೊಂಡು ಸಾಮಾಜಿಕ ಅಂತರದೊಂದಿಗೆ ಜನರು ಜಾತಿ ಮತ ಭೇದವಿಲ್ಲದೆ ಮುಂಜಾನೆ 5 ಗಂಟೆಯಿಂದಲೇ ಪಡೆದುಕೊಂಡರು. ಮಾಸ್ಕ್ ಬಳಸಿಕೊಂಡು ಬಾಟಲಿಯಲ್ಲಿ ಕಷಾಯ ಮತ್ತು ಮೆಂತೆ ಗಂಜಿ ನೀಡುವ ವ್ಯವಸ್ಥೆ ಕಲ್ಪಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next