Advertisement

Naragunda: ನರಗುಂದದಲ್ಲಿ ಭಿನ್ನಮತ ಸ್ಫೋಟ

09:37 PM Apr 07, 2023 | Team Udayavani |

ಗದಗ: ಮಾಜಿ ಶಾಸಕ ಬಿ.ಆರ್‌.ಯಾವಗಲ್‌ ಹೆಸರನ್ನು ನರಗುಂದ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆ ಮಾಡಿರುವುದರಿಂದ ಕ್ಷೇತ್ರದ ಕೈ ಪಡೆಯಲ್ಲಿ ಆಂತರಿಕ ಮುನಿಸು ಎದುರಾಗಿದ್ದು, ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದ ಪಂಚಮಸಾಲಿ ಮುಖಂಡ ಡಾ| ಸಂಗಮೇಶ ಕೊಳ್ಳಿ, ಗಾಣಿಗ ಸಮುದಾಯದ ಮುಖಂಡ ದಶರಥ ಗಾಣಿಗೇರ, ಹಾಲುಮತ ಸಮಾಜದ ಪ್ರಕಾಶ ಕರಿ ಸೇರಿ ಹಲವರು ಪಕ್ಷದ ವಿರುದ್ಧ ಮುನಿಸಿಕೊಂಡಿದ್ದಾರೆ.

Advertisement

ಗಂಗಾವತಿಯಲ್ಲಿ ಆಂತರಿಕ ಬೇಗುದಿ
ಕೊಪ್ಪಳ: ಗಂಗಾವತಿ ಕ್ಷೇತ್ರದ ಟಿಕೆಟ್‌ ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ಅವರಿಗೆ ಲಭಿಸಿದ್ದು, ಟಿಕೆಟ್‌ ಆಕಾಂಕ್ಷಿತರಾಗಿದ್ದ ಮಾಜಿ ಎಂಎಲ್‌ಸಿ ಎಚ್‌.ಆರ್‌. ಶ್ರೀನಾಥ, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಮುನಿಸಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಈ ಬಾರಿ ಇಕ್ಬಾಲ್‌ ಅನ್ಸಾರಿ, ಎಚ್‌.ಆರ್‌.ಶ್ರೀನಾಥ, ಮಲ್ಲಿಕಾರ್ಜುನ ನಾಗಪ್ಪ ಟಿಕೆಟ್‌ಗೆ ಭಾರಿ ಫೈಟ್‌ ನಡೆಸಿದ್ದರು. ಕೊನೆಗೂ ಸಿದ್ದರಾಮಯ್ಯ ಅವರು ಅನ್ಸಾರಿ ಅವರಿಗೆ ಟಿಕೆಟ್‌ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಟಿಕೆಟ್‌ ತಪ್ಪಿದ ಈ ಇಬ್ಬರು ಒಳಮುನಿಸು ವ್ಯಕ್ತಪಡಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next